LATEST NEWS
ಬಸ್ ನಲ್ಲಿ ಬಿಟ್ಟು ಹೋಗಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣವನ್ನು ವಾರಸುದಾರರಿಗೆ ಮರಳಿಸಿದ ಬಸ್ ಕಂಡಕ್ಟರ್
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ಮಂಗಳೂರು ಮಾರ್ಚ್ 07: ಮಂಗಳೂರಿನ ಖಾಸಗಿ ಬಸ್ ಒಂದರಲ್ಲಿ ಪ್ರಯಾಣಿಕರೊಬ್ಬರು ಲಕ್ಷಾಂತರ ಮೌಲ್ಯದ ಚಿನ್ನಾಭರಣವನ್ನು ಮರೆತು ಬಿಟ್ಟು ಹೋಗಿದ್ದು, ಅದನ್ನು ಮರಳಿ ವಾರಸುದಾರರಿಗೆ ಬಸ್ ನ ಕಂಡಕ್ಟರ್ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ.
ನವದುರ್ಗ ಬಸ್ಸಿನ ನಿರ್ವಾಹಕರದ ಸಂತೋಷ ಶೆಟ್ಟಿ ಅವರಿಗೆ ಬಸ್ ನಿರ್ವಹಣಾ ಸಮಯದಲ್ಲಿ ಪ್ರಯಾಣಿಕರೊಬ್ಬರು ಬಿಟ್ಟು ಹೋದ ಚಿನ್ನಾಭರಣ ಸಿಕ್ಕಿದೆ. ಬಳಿಕ ಚಿನ್ನ ಕಳೆದುಕೊಂಡವರ ಮಾಹಿತಿ ಪಡೆದ ಅವರು ಕಟೀಲ್ ಕಿನ್ನಿಗೋಳಿ ನಿವಾಸಿಗಳನ್ನು ಹುಡುಕಿ 6 ಪವನ್ ಹೆಚ್ಚಿನ ಚಿನ್ನಭಾರಣ ಗಳ್ಳನ್ನು ಹಿಂತಿರುಗಿಸಿ ಮಾನವೀಯತೆ ಹಾಗು ಪ್ರಾಮಾಣಿಕತೆ ಮೆರೆದಿದ್ದಾರೆ.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
ಚಿನ್ನವನ್ನು ಮರಳಿಪಡೆದವರು ಬಸ್ಸಿನ ಚಾಲಕ ನಿರ್ವಹಕಾರ ಪ್ರಾಮಾಣಿಕತೆ ಯನ್ನು ಸಂತೋಷದಿಂದ ಮನತ್ಪೂರ್ವಕವಾಗಿ ಕೊಂಡಾಡಿದ್ದಾರೆ. ತಮ್ಮ ರಕ್ತ ಸಂಬಂಧ ದಲ್ಲ್ಲೇ ಪ್ರಾಮಾಣಿಕತೆ ಹುಡುಕಲು ಕಷ್ಟಕರವಾದ ಈಗಿನ ಕಾಲ ಘಟ್ಟದಲ್ಲಿ ಕರಾವಳಿ ಜನತೆ ಮೆಚ್ಚುವ ಕೆಲಸ ಮಾಡಿದ ನಿಮಗೆ ಪ್ರೀತಿಯ ಧನ್ಯವಾದಗಳು ಎಂದಿದ್ದಾರೆ.
You must be logged in to post a comment Login