Connect with us

LATEST NEWS

ಪೊಲೀಸರು ವಾರ್ನಿಂಗ್ ಮಾಡಿದರೂ ಮತ್ತೆ ಅಪ್ರಾಪ್ತನಿಗೆ ಬೈಕ್ ನೀಡಿದ ತಂದೆ ತಾಯಿ..ಆದರೆ ಆಗಿದ್ದೆ ಬೇರೆ…!!

ಉಡುಪಿ ಫೆಬ್ರವರಿ 11:ಅಪ್ರಾಪ್ತ ಬಾಲಕನಿಗೆ ಬೈಕ್ ನೀಡಬೇಡಿ ಎಂದು ಪೊಲೀಸರು ತಂದೆತಾಯಿವರಿಗೆ ವಾರ್ನ್ ಮಾಡಿದ್ದರೂ ಕೂಡ ಕೇಳದೆ ಮಗನಿಗೆ ಮತ್ತೆ ಬೈಕ್ ನೀಡಿದ್ದ ಪರಿಣಾಮ ಇಂದು ಬಾಲಕ ನಡುರಸ್ತೆಯಲ್ಲಿ ದುರಂತ ಅಂತ್ಯ ಕಂಡಿದ್ದಾನೆ.
ಹೌದು ಅತಿ ವೇಗದಲ್ಲಿ ಬೈಕ್‌ ಓಡಿಸುತ್ತಿದ್ದ 15 ವರ್ಷದ ಬಾಲಕ ಇಲ್ಲಿನ ಶಿರೂರು ಬಳಿ ಡಿವೈಡರ್‌ಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.


ಮೃತ ಬಾಲಕನನ್ನು ಹಡವಿನಕೋಣೆ ನಿವಾಸಿ ಆರಾನ್‌ (15) ಎಂದು ಗುರುತಿಸಲಾಗಿದೆ. ಆರಾನ್‌ ಕಳೆದ ವಾರ ಬೈಂದೂರಿನಲ್ಲಿ ಪರವಾನಗಿ ಇಲ್ಲದೆಯೇ ಬೈಕ್‌ ಚಲಾಯಿಸುತ್ತಿದ್ದ ಹಿನ್ನೆಲೆ ಪೊಲೀಸರು ದಂಡ ವಿಧಿಸಿದ್ದರು. ಅವರು ಬೈಕನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿ ಎರಡು ದಿನಗಳ ಕಾಲ ವಶದಲ್ಲಿರಿಸಿದ್ದರು. ನಂತರ ಅವನ ತಾಯಿಯನ್ನು ಪೊಲೀಸ್ ಠಾಣೆಗೆ ಕರೆಸಿ ಕಾನೂನು ನಿಮಯಗಳನ್ನು ಪಾಲಿಸುವಂತೆ ಪೊಲೀಸರು ಸಲಹೆ ನೀಡಿದರು.


ಇಷ್ಟಕ್ಕೆ ಸುಮ್ಮನಾಗದ ಆತ ಗುರುವಾರ ಮುಂಜಾನೆ ಅತಿ ವೇಗದಿಂದ ಬೈಕ್ ಚಲಾಯಿಸುತ್ತಲೇ ಪ್ರಾಣ ಬಿಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಬೈಂದೂರು ಠಾಣಾಧಿಕಾರಿ ಸಂಗೀತಾ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *