Connect with us

DAKSHINA KANNADA

ಪಹಲ್ಗಾಮ್ ದಾಳಿಯನ್ನು ಮಾಧ್ಯಮಗಳು ಕೋಮು ದ್ವೇಷದ toolkit ಆಗಿ ಉಪಯೋಗಿಸುತ್ತಿದೆ: ರಿಯಾಸ್ ಕಡಂಬು

ಮಂಗಳೂರು, ಏಪ್ರಿಲ್ 23 : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದವರಿಗೆ ಗೌರವ ಮತ್ತು ಒಗ್ಗಟ್ಟಿನ ಸಂಕೇತವಾಗಿ ಎಸ್ ಡಿ ಪಿ ಐ ವತಿಯಿಂದ ನಗರದ ಜ್ಯೋತಿ ಸರ್ಕಲ್ ಮುಂದೆ ಮೊಂಬತ್ತಿ ಹಿಡಿದು ಪ್ರತಿಭಟಿಸಿ ಮೌನ ಪ್ರಾರ್ಥನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಭೆಯನ್ನುದ್ದೇಶಿಸಿ  ಮಾತನಾಡಿದ ಎಸ್ ಡಿ ಪಿ ಐ ನ ರಾಜ್ಯ ಕಾರ್ಯದರ್ಶಿ ರಿಯಾಸ್ ಕಡಂಬು ಪಹಲ್ಗಾಮ್ ದಾಳಿಯನ್ನು ಮಾಧ್ಯಮಗಳು ಕೋಮು ದ್ವೇಷದ toolkit ಆಗಿ ಉಪಯೋಗಿಸುತ್ತಿದೆ, ಮೋದಿ ಸರಕಾರ ಬಂದ ಬಳಿಕ ಈ ರೀತಿ ಹಲವು ದಾಳಿ ನಡೆದಿದೆ.

ಅಮಾನವೀಯ ದಾಳಿ ಮಾಡುವವ ಯಾವ ಧರ್ಮದವನಾದ್ರೂ ಒಪ್ಪಿಕೊಳ್ಳು ಆಗುವುದಿಲ್ಲ, ಭಯೋತ್ಪಾದಕರನ್ನು ತಡೆಯುವಲ್ಲಿ ಮೋದಿ ಸರಕಾರ ಸಂಪೂರ್ಣ ವೈಫಲ್ಯವಾಗಿದೆ. ದೇಶದ ಪ್ರಜೆಗಳಿಗೆ ರಕ್ಷಣೆ ಕೊಡಲು ಆಗದ ಕೇಂದ್ರ ಸರಕಾರ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ಹೇಳಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *