DAKSHINA KANNADA
ಗಣೇಶಪುರ ಬ್ರಹ್ಮಕಲಶ : ಹೊರೆಕಾಣಿಕೆ ಜಾಥಾ

ಸುರತ್ಕಲ್ ಎಪ್ರಿಲ್ 18: : ಶ್ರೀ ಕ್ಷೇತ್ರ ಗಣೇಶಪುರ ಶ್ರೀ ಮಹಾಗಣಪತಿ ದೇವಸ್ತಾನ ಇಲ್ಲಿ ನಡೆಯುತ್ತಿರುವ ಜಾತ್ರೆ, ಸಹಸ್ರಕುಂಭ ಬ್ರಹ್ಮಕಲಶಾಭಿಷೇಕ, ಬ್ರಹ್ಮರಥ ಸಮರ್ಪಣೆ, ಭಜನಾ ಸಂಭ್ರಮೋತ್ಸವ, ನಾಗಮಂಡಲ, ಜಾರಂದಾಯ ನೇಮ ಪ್ರಯುಕ್ತ ಬೃಹತ್ ಹಸಿರು ಹೊರೆ ಕಾಣಿಕೆ ವಾಹನ ಜಾಥಾ ಮೆರವಣಿಗೆ ಯನ್ನು ಇಡ್ಯಾ ಮಹಾಲಿಂಗೇಶ್ವರ ದೇವಳದ ವಠಾರದಲ್ಲಿ ದೇವಳದ ಆನುವಂಶಿಕ ಮೊಕ್ತೇಸರ ವೇದಮೂರ್ತಿ ಐ ರಮಾನಂದ ಭಟ್ ಉದ್ಘಾಟಿಸಿದರು.
ಇಡ್ಯ ಮಹಾಲಿಂಗೇಶ್ವರ ದೇವಳಕ್ಕೂ ಗಣೇಶಪುರ ಗಣಪತಿಗೂ ಅವಿನಾಭಾವ ಸಂಬಂದವಿದೆ. ಗಣಪತಿ ದೇವರ ಪ್ರತಿಷ್ಠಾ ಸಂದರ್ಭದಲ್ಲಿ ಇಡ್ಯ ಕ್ಷೇತ್ರದಿಂದ ದೀಪ ಜ್ಯೋತಿಯನ್ನು ಒಯ್ಯಲಾಗಿತ್ತು. ಈ ಬಾರಿಯೂ ಗಣೇಶಪುರದ ಬ್ರಹ್ಮ ಕಲಸದ ಕಾರ್ಯಕ್ರಮದ ಅಂಗವಾದ ಭಜನಾ ಸಂಭ್ರಮ ಉತ್ಸವದ ಉದ್ಘಾಟನಾ ದೀಪವನ್ನು ಇಡ್ಯಕ್ಷೇತ್ರದ ಪ್ರತಿನಿಧಿಯಿಂದ ಪ್ರಜ್ವಲಿಸಲಾಗಿತ್ತು ಎಂದು ಹೇಳಿದ ಅವರು ಬ್ರಹ್ಮಕಲಶ ಮಹೋತ್ಸವಕ್ಕೆ ಶುಭ ಹಾರೈಸಿದರು.

ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಸಮಾಜ ಸೇವಕ ಕಡಂಬೋಡಿ ಮಹಾಬಲ ಪೂಜಾರಿ, ಗುತ್ತಿಗೆದಾರ ಜೆ.ಡಿ.ವೀರಪ್ಪ ಮತ್ತಿತರರು ಉಪಸ್ಥಿತರಿದ್ದರು. ಹಸಿರು ಹೊರೆಕಾಣಿಕೆ ವಾಹನ ಜಾಥಾವು ಕೃಷ್ಣಾಪುರಕ್ಕೆ ಯುವಕ ಮಂಡಲದ ಬಳಿಗೆ ಸಾಗಿತು.
1 Comment