Connect with us

KARNATAKA

ಇನ್ಮುಂದೆ ನಾಟಕ ಆಡಿದ್ರೆ ಜೈಲ್ ಕಂಬಿ ಎಣಿಸಬೇಕಾಗುತ್ತೆ…ಚಕ್ರವರ್ತಿ ಸೂಲಿಬೆಲೆ ಗೆ ಎಂ.ಬಿ ಪಾಟೀಲ್ ವಾರ್ನಿಂಗ್

Share Information

ಜಯಪುರ ಜೂನ್ 04 : ರಾಜ್ಯದಲ್ಲಿ ಹಿಟ್ಲರ್ ಆಡಳಿತ ಜಾರಿಯಲ್ಲಿದೆ ಎಂದ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಸಚಿವ ಎಂ.ಬಿ ಪಾಟೀಲ್ ತಿರುಗೇಟು ನೀಡಿದ್ದು, ಇನ್ಮುಂದೆ ನಾಟಕ ಆಡಿದ್ರೆ ಜೈಲ್ ಕಂಬಿ ಎಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸದ್ಯ ರಾಜ್ಯದಲ್ಲಿ ಹಿಟ್ಲರ್ ಆಡಳಿತ ಜಾರಿಯಲ್ಲಿದೆ ಎಂಬ ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ಸಂಬಂಧಿಸಿದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಂ.ಬಿ. ಪಾಟೀಲ, ನಾಲ್ಕು ವರ್ಷ ಸೂಲಿಬೆಲೆ ಏನು ಮಾಡಿದ್ದಾರೆಂಬುದು ಗೊತ್ತಿದೆ. ಪಠ್ಯ ಪರಿಷ್ಕರಣೆ ಹೆಸರಲ್ಲಿ ವಿವಾದ ಎಬ್ಬಿಸಿದರು. ಹಿಜಾಬ್, ಹಲಾಲ್, ಆಜಾನ್ ಎಂದೆಲ್ಲಾ ಶಾಂತಿ ಕದಡುವ ಯತ್ನ ಮಾಡಿದರು. ನಮ್ಮ ಸರ್ಕಾರದಲ್ಲಿ ಬಾಲ ಬಿಚ್ಚಿದರೆ ಕಂಬಿ ಎಣಿಸುವುದ ಗ್ಯಾರಂಟಿ ಎಂದರು.

ರಾಜ್ಯದ ಎಲ್ಲ ಜನ, ಜನಾಂಗ ಹಾಗೂ ಧರ್ಮದ ಜನರನ್ನು ಒಳಗೊಂಡು ಸುಭದ್ರ ಆಡಳಿತ ನೀಡುವ ನಿಟ್ಟಿನಲ್ಲಿ ಕಾಂಗ್ರೆಸ್ ಶ್ರಮಿಸಲಿದೆ. ಕುವೆಂಪು ಅವರು ಕಂಡ ಸರ್ವಜನಾಂಗದ ಶಾಂತಿಯ ತೋಟ ಮರುಸ್ಥಾಪಿಸಲಾಗುವುದು. ಎಲ್ಲ ಜಾತಿ, ಧರ್ಮದವರನ್ನು ಒಳಗೊಂಡು ಯೋಜನೆ ರೂಪಿಸಲಾಗುವುದು. ದೀನ-ದಲಿತರು ಹಾಗೂ ಶೋಷಿತರ ಪರ ಆಡಳಿತ ನೀಡುವುದಾಗಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.


Share Information
Advertisement
Click to comment

You must be logged in to post a comment Login

Leave a Reply