Connect with us

    LATEST NEWS

    ಕೋಟ ಪತ್ರದ ಬೆನ್ನಲ್ಲೆ ಮತ್ಯಗಂಧ ರೈಲಿನ ಎಸಿ ಬೋಗಿಯ ಮೇಲ್ಚಾವಣಿ ಕುಸಿತ

    ಮಂಗಳೂರು ಅಗಸ್ಟ್ 18: ಮಂಗಳೂರು ಮುಂಬೈಯ ಪ್ರಯಾಣಿಕರ ಪ್ರಮುಖ ಕೊಂಡಿಯಾಗಿರುವ ಮತ್ಸ್ಯಗಂಧಾ ಎಕ್ಸ ಪ್ರೆಸ್ ರೈಲಿನ ಎಸಿ ಬೋಗಿಯೊಂದರ ಮೇಲ್ಚಾವಣಿ ಕುಸಿತವಾಗಿದ್ದು. ಇದರ  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಂಗಳೂರು-ಮುಂಬೈ ಮತ್ಸ್ಯಗಂಧಾ ಎಕ್ಸ್ಪ್ರೆಸ್ನ ಬೋಗಿಗಳನ್ನು ಮೇಲ್ದರ್ಜೆಗೇರಿಸುವಂತೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದ ಒಂದು ವಾರದ ನಂತರ ಈ ಘಟನೆ ನಡೆದಿದೆ.


    ಮಂಗಳೂರು ಮುಂಬೈ ಸಂಪರ್ಕಿಸುವ ಪ್ರಮುಖ ರೈಲು ಮತ್ಯಗಂಧವಾಗಿದ್ದು, ಕಳೆದ 26 ವರ್ಷಗಳಿಂದ ಸೇವೆ ನೀಡುತ್ತಿದೆ. ಅತೀ ಹೆಚ್ಚು ಪ್ರಯಾಣಿಕರನ್ನು ಈ ರೈಲು ಕೊಂಡೊಯ್ದರು, ಈ ರೈಲಿನ ಬೋಗಿಗಳು ಮಾತ್ರ ಇನ್ನೂ ಹಳೆಯದ್ದೇ ಆಗಿದೆ. ಈಗಾಗಲೇ ಹಲವು ಬಾರಿ ಪ್ರಯಾಣಿಕರುಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ, ಇದೀಗ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮತ್ಸ್ಯಗಂಧಾ ಎಕ್ಸ್ಪ್ರೆಸ್ನ ಬೋಗಿಗಳನ್ನು ಮೇಲ್ದರ್ಜೆಗೇರಿಸುವಂತೆ ಕೇಂದ್ರ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ.

    #REALWARFIGHTER brigadier I N Rai ‘ದೇಶಕ್ಕಾಗಿ ತ್ಯಾಗ ಮಾಡಿದವರ ಮುಂದೆ ನಾನು ಕಿರಿಯ’…! episode 1


    ಎಸಿ ಕೋಚ್‌ನ ಮೇಲ್ಛಾವಣಿ ಕುಸಿತದ ಬಗ್ಗೆ ಮಾಹಿತಿ ಕೋರಿದ ಕೋಟ ಶ್ರೀನಿವಾಸ್ ಪೂಜಾರಿ ಅವರು ಆದಷ್ಟು ಬೇಗ ದಕ್ಷಿಣ ರೈಲ್ವೆ ಮತ್ತು ಕೇಂದ್ರ ರೈಲ್ವೇ ಸಚಿವರ ಗಮನಕ್ಕೆ ತಂದು ಕೋಚ್‌ಗಳನ್ನು ಬದಲಾಯಿಸಿ ಎಲ್‌ಎಚ್‌ಬಿ ಕೋಚ್‌ಗಳನ್ನು ನೀಡುವುದಾಗಿ ಭರವಸೆ ನೀಡಿದರು. ಇನ್ನು ಈ ಮಧ್ಯೆ ಮತ್ಸ್ಯಗಂಧದ ಎಸಿ ಕೋಚ್‌ನ ಮೇಲ್ಛಾವಣಿ ಕುಸಿದಿರುವುದು ಹಾಗೂ ಕೋಟ ಶ್ರೀನಿವಾಸ್ ಪೂಜಾರಿ ಅವರು ಆಗಸ್ಟ್ 23 ರಂದು ಸಲ್ಲಿಸಿದ ಪತ್ರವನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply