Connect with us

    DAKSHINA KANNADA

    ಮಂಗಳೂರು : ಅಳಪೆ ದಕ್ಷಿಣ ವಾರ್ಡಿನಲ್ಲಿ 2 ಕೋ.ರೂ ವಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಕಾಮತ್ ಭೂಮಿಪೂಜೆ..!

    ಮಂಗಳೂರು :  ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 50ನೇ ಅಳಪೆ ದಕ್ಷಿಣ ವಾರ್ಡಿನಲ್ಲಿ 2 ಕೋಟಿ ರೂ ವಿಶೇಷ ಅನುದಾನದಲ್ಲಿ ಪಡೀಲ್ ನಿಂದ ಬಜಾಲ್ ವರೆಗಿನ ರಸ್ತೆ ಅಗಲೀಕರಣ ಹಾಗೂ ಪೂರಕ ಅಭಿವೃದ್ಧಿ ಕಾಮಗಾರಿಯ ಭೂಮಿ ಪೂಜೆಯನ್ನು ಶಾಸಕ ವೇದವ್ಯಾಸ್ ಕಾಮತ್ ಅವರು ನೆರವೇರಿಸಿದರು.

    ನಂತರ ಮಾತನಾಡಿದ ಶಾಸಕರು, ಸ್ಥಳೀಯ ಪಾಲಿಕೆ ಸದಸ್ಯೆ ಶ್ರೀಮತಿ ಶೋಭಾ ಪೂಜಾರಿಯವರ ಮನವಿಯ ಮೇರೆಗೆ ಸಾರ್ವಜನಿಕರಿಗೆ ಅತೀ ಅಗತ್ಯವಿರುವ ಈ ಯೋಜನೆಯನ್ನು ಪಾಲಿಕೆಯ ಪ್ರೀಮಿಯರ್ ಎಫ್.ಐ.ಆರ್ ನಿಂದ ಕೈಗೆತ್ತಿಕೊಳ್ಳಲಾಗಿದ್ದು ಪೆರ್ಜಿಲ ಹೋಗುವ ರಸ್ತೆಯಿಂದ ಬಜಾಲ್ ಚರ್ಚ್ ವರೆಗೆ ಅಭಿವೃದ್ಧಿಯಾಗಲಿದ್ದು ಶೀಘ್ರದಲ್ಲಿ ಈ ಕಾಮಗಾರಿ ಮುಗಿದು ಸಾರ್ವಜನಿಕರ ಬಳಕೆಗೆ ಲಭಿಸಲೆಂದು ಆಶಿಸುತ್ತೇನೆ ಎಂದರು

    ಈ ಸಂದರ್ಭದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮನಪಾ ಸದಸ್ಯರಾದ ಗಣೇಶ್ ಕುಲಾಲ್, ಬೂತ್ ಅಧ್ಯಕ್ಷರಾದ ಹರೀಶ್, ಅರುಣ್, ಪೆರ್ಜಿಲ ದೈವಸ್ಥಾನದ ಮುಖ್ಯಸ್ಥರು ಯತೀಶ್ ಪೆರ್ಜಿಲ, ರವೀಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಭರತ್ ಶೆಟ್ಟಿ, ಬೂತ್ ನ ಪದಾಧಿಕಾರಿಗಳು, ಮಹಿಳಾ ಸಮಿತಿಯ ಸದಸ್ಯರು ಮುಂತಾದ ಪ್ರಮುಖರು ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply