LATEST NEWS
ಮಂಗಳೂರು : ತೋಟ ಬೆಂಗ್ರೆ ಅಳಿವೆ ಬಾಗಿಲು ವ್ಯಕ್ತಿ ಶವ ಪತ್ತೆ, ಕೊಲೆ ಶಂಕೆ..!
ಮಂಗಳೂರು : ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ನ ತೋಟ ಬೆಂಗ್ರೆ ಎಂಬಲ್ಲಿನ ಅಳಿವೆ ಬಾಗಿಲು ಬಳಿಯ ಸಮುದ್ರ ತೀರದ ಬಳಿ ವ್ಯಕ್ತಿಯ ಶನಿವಾರ ಅಪರಾಹ್ನ ಮೃತದೇಹ ಸಿಕ್ಕಿದ್ದು ಮೇಲ್ನೋಟಕ್ಕೆ ಇದೊಂದು ಕೊಲೆ ಎಂದು ಸಂಶಯಿಸಲಾಗಿದೆ.
ಮೃತ ಶರೀರದ ಬಲ ಕಾಲಿಗೆ, ಬಲ ಕೈಗೆ ಹಾಗೂ ಹಣೆಯ ಭಾಗದಲ್ಲಿ ರಕ್ತಗಾಯವಿದ್ದು ಮೇಲ್ನೋಟಕ್ಕೆ ಕೊಲೆ ಮಾಡಿರುವ ರೀತಿ ಕಂಡು ಬರುತ್ತದೆ. ಮೃತನನ್ನು ಮುದುಕಪ್ಪ @ ಮುತ್ತು(40) ಎಂದು ಗುರುತ್ತಿಸಲಾಗಿದೆ. ಪಣಂಬೂರು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿ ತನಿಖೆ ಆರಂಭಿಸಿದ್ದಾರೆ.
You must be logged in to post a comment Login