Connect with us

    LATEST NEWS

    ಮಂಗಳೂರು – ಮೇಯರ್ ಆಗಿ ಜಯಾನಂದ್ ಅಂಚನ್ ಹಾಗೂ ಉಪಮೇಯರ್ ಆಗಿ ಪೂರ್ಣಿಮಾ ಆಯ್ಕೆ

    ಮಂಗಳೂರು ಸೆಪ್ಟೆಂಬರ್ 09: ಮಂಗಳೂರಿನ ನೂತನ ಮೇಯರ್ ಆಗಿ ಜಯಾನಂದ್ ಅಂಚನ್ ಹಾಗೂ ಉಪಮೇಯರ್ ಆಗಿ ಪೂರ್ಣಿಮಾ ಆಯ್ಕೆಯಾಗಿದ್ದಾರೆ,


    ಇಂದು ನಡೆದ ಮೇಯರ್ ಚುನಾವಣೆಲ್ಲಿ ಕದ್ರಿ ಬಿ.ವಾರ್ಡ್ ನ ಪಾಲಿಕೆ ಸದಸ್ಯರಾಗಿರುವ ಜಯಾನಂದ ಅಂಚನ್ ಪಾಲಿಕೆ‌ ಸದಸ್ಯರಾಗಿ ಎರಡನೇ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಉಪ ಮೇಯರ್ ಆಗಿ ಸೆಂಟ್ರಲ್ ವಾರ್ಡ್ ನ ಪೂರ್ಣಿಮಾ ಆಯ್ಕೆಯಾದರು.

    ಕಳೆದ ಸಾಲಿನಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಮಂಗಳಾದೇವಿ ವಾರ್ಡ್ ನ ಸದಸ್ಯ ಪ್ರೇಮಾನಂದ ಶೆಟ್ಟಿ ಮೇಯರ್ ಆಗಿದ್ದರು. ಹಾಗಾಗಿ ಈ ಬಾರಿ ಬಿಜೆಪಿಯು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಸದಸ್ಯರಿಗೆ ಮೇಯರ್ ಹುದ್ದೆ ನೀಡಿದೆ. ಕಳೆದ ಸಲ ಬಂಟ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಿದ್ದ ಬಿಜೆಪಿ ಈ ಬಾರಿ ಬಿಲ್ಲವ ಸಮುದಾಯದವರಿಗೆ ಮೇಯರ್ ಹುದ್ದೆ ನೀಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply