KARNATAKA
ಮಂಡ್ಯ -ಮಹಿಳೆಯ ಕೈಕಾಲು ಕಟ್ಟಿ ಅತ್ಯಾಚಾರ ನಡೆಸಿ ಕೊಲೆ
ಮಂಡ್ಯ ಫೆಬ್ರವರಿ 3: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಭೀಕರ ಘಟನೆಯೊಂದು ನಡೆದಿದೆ. ಮೂವತ್ತೊಂಭತ್ತು ವರ್ಷದ ಮಹಿಳೆಯ ಮನೆಯಲ್ಲಿ ಆಕೆಯನ್ನು ಮಂಚಕ್ಕೆ ಕಟ್ಟಿ ಹಾಕಿ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದೆ.
ಪಟ್ಟಣದ ವಿ.ವಿ ನಗರದ 9 ನೇ ಕ್ರಾಸ್ ನ ಮನೆಯೊಂದರಲ್ಲಿ ವಾಸವಾಗಿದ್ದ ಪೂರ್ಣಿಮಾ(39) ಎಂಬ ಮಹಿಳೆಯನ್ನು ರಾತ್ರಿ ಮಂಚಕ್ಕೆ ಕೈ- ಕಾಲು ಕಟ್ಟಿ, ಅತ್ಯಾಚಾರ ಮಾಡಿ ಬಳಿಕ ದಿಂಬಿನಿಂದ ಉಸಿರುಗಟ್ಟಿಸಿ ಸಾಯಿಸಿ ಪರಾರಿಯಾಗಿದ್ದಾರೆ. ರಾತ್ರಿ ಮನೆಗೆ ಬಂದಾಗ ಮಗನಿಗೆ ತನ್ನ ತಾಯಿ ಹತ್ಯೆಯಾಗಿರೋದು ತಿಳಿದು ಬಂದಿದೆ.
ಇನ್ನು ಈ ಕುಟುಂಬದಲ್ಲಿ ಮೂವರು ಮಾತ್ರ ಇದ್ದು, ಮೃತಳ ಗಂಡ ಅಡುಗೆ ಭಟ್ಟನ ಕೆಲಸ ಮಾಡುತ್ತಾ, ಜೀವನ ಸಾಗಿಸ್ತಿದ್ರು. ಕೊಲೆಯಾದ ಪೂರ್ಣಿಮಾ ಅಲ್ವಸ್ವಲ್ಪ ಹಣಕಾಸು ವ್ಯವಹಾರ ಮಾಡ್ತಿದ್ದು, ಇತ್ತೀಚೆಗೆ ಮನೆ ಕಟ್ಟಲು ಪ್ರಾರಂಭಿಸಿದ್ದು, ಆ ಕಾರಣಕ್ಕಾಗಿ ವಿವಿ ನಗರದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದರು.
ಘಟನೆಯ ಸುದ್ದಿ ತಿಳಿಯುತ್ತಲೇ ಮದ್ದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಬಳಿಕ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೂಡ ಭೇಟಿ ನೀಡಿ ಪರಿಶೀಲಿಸಿ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡ್ರು. ಇನ್ನು ಕೊಲೆಯಾದ ಮಹಿಳೆ ಹಣಕಾಸು ವ್ಯವಹಾರ ನಡೆಸ್ತಿರೋ ಹಿನ್ನೆಲೆಯಲ್ಲಿ ಈ ಕೊಲೆ ಯಾವ ಕಾರಣಕ್ಕಾಗಿ ಮಾಡಲಾಗಿದೆ ಅನ್ನೋ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
You must be logged in to post a comment Login