Connect with us

    DAKSHINA KANNADA

    ಪಕ್ಕದಲ್ಲೇ ನಾಯಿ ಇದ್ದರೂ ತಿನ್ನದೆ ಸುಮ್ಮನೆ ಕುಳಿತ ಚಿರತೆ..ಬಾತ್ ರೂಮ್ ನಲ್ಲಿ ಲಾಕ್ ಆದ ಬೇಟೆ ಹಾಗೂ ಬೇಟೆಗಾರ

    ಪುತ್ತೂರು ಫೆಬ್ರವರಿ 3: ನಾಯಿ ಸಿಕ್ಕಿದರೆ ಸಾಕು ಎತ್ತಿಕೊಂಡು ಹೋಗಿ ತಿಂದು ಮುಂಗಿಸುವ ಚಿರತೆಗೆ ಈಗ ಪಕ್ಕದಲ್ಲೇ ನಾಯಿ ಇದ್ದರೂ ತಿನ್ನಲು ಆಗದೆ ಮಿಕಿಮಿಕಿ ನೋಡುತ್ತಾ ಕುಳಿತ ಕುತೂಹಲದ ಘಟನೆಯೊಂದ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಕೈಕಂಬ ಗ್ರಾಮದಲ್ಲಿ ನಡೆದಿದೆ.


    ಕಡಬ ತಾಲೂಕಿನ ಸುಬ್ರಹ್ಮಣ್ಯ ಸಮೀಪದ ಈ ಗ್ರಾಮದಲ್ಲಿನ ಮನೆಯೊಂದರ ಶೌಚಗೃಹದಲ್ಲಿ ಅತ್ತ ನಾಯಿ, ಇತ್ತ ಚಿರತೆ ಒಟ್ಟಿಗೇ ಇರುವ ಅಪರೂಪದ ದೃಶ್ಯ ಕಂಡುಬಂದಿದೆ. ನಾಯಿಯನ್ನು ಹಿಡಿಯಲು ಚಿರತೆ ಬಂದಿದೆ. ಚಿರತೆ ಬಂದದನ್ನು ಕಂಡ ನಾಯಿ ಓಡೋಡಿ ಹೋಗಿದೆ. ಅದನ್ನು ಚಿರತೆ ಅಟ್ಟಿಸಿಕೊಂಡು ಬಂದಿದೆ. ನಾಯಿ ಶೌಚಗೃಹದೊಳಕ್ಕೆ ನುಗ್ಗಿದೆ. ಅದರ ಹಿಂದೆ ಬಂದ ಚಿರತೆಯೂ ಅಲ್ಲಿಯೇ ನುಗ್ಗಿದೆ.

    ಶೌಚಗೃಹದಲ್ಲಿ ಬಂದು ತನ್ನ ಪ್ರಾಣಕ್ಕೆ ಕುತ್ತು ತಂದುಕೊಂಡೆ ಎಂಬ ಅರಿವು ಚಿರತೆಗೆ ಆಗಿದೆ. ಆದ್ದರಿಂದ ಎದುರಿಗೆ ಬೇಟೆ ಇದ್ದರೂ ಪ್ರಾಣ ಉಳಿಸಿಕೊಳ್ಳಲು ಭಯದಿಂದ ಅಲ್ಲಿಯೇ ಮಲಗಿಬಿಟ್ಟಿದೆ. ಚಿರತೆ ಒಳಕ್ಕೆ ನುಗ್ಗಿರುವುದನ್ನು ಕಂಡ ಗ್ರಾಮಸ್ಥರು ಹೊರಗಡೆಯಿಂದ ಬೀಗ ಹಾಕಿ ಹೋಗಿದ್ದಾರೆ.

    ನಂತರ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ. ಸಿಬ್ಬಂದಿ ಬಂದು ಬಾಗಿಲು ತೆರೆದಾಗ ಚಿರತೆ ನಾಯಿಗೆ ಏನೂ ಹಾನಿ ಮಾಡದೇ ಇರವುದು ಕಂಡುಬಂದಿದೆ. ಆದರೆ ಅತ್ತ ನಾಯಿ, ಇತ್ತ ಚಿರತೆ ಭಯದಿಂದ ಇರುವುದು ಕಂಡಿದೆ. ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ಪಡೆದುಕೊಂಡು ಹೋಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply