Connect with us

    KARNATAKA

    ಪ್ರೇಮ ನಿವೇದನೆ ನಿರಾಕರಿಸಿದ ಬಾಲಕಿಯನ್ನು ಇರಿದು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿದ ಪಾಗಲ್ ಪ್ರೇಮಿ..!

    ಹೈದರಾಬಾದ್ : ಅಪ್ರಾಪ್ತ ಬಾಲಕಿಯಲ್ಲಿ ಮಾಡಿದ ಪ್ರೇಮ ನಿವೇದನೆ ನಿರಾಕರಿಸಿದ ಬಾಲಕಿಯನ್ನು ಪಾಗಲ್ ಪ್ರೇಮಿ ಯವಕನೋರ್ವ ಇರಿದು ಬಳಿಕ ರೈಲಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದ್ರಾಬಾದಿನಲ್ಲಿ ನಡೆದಿದೆ.

     

    ಹೈದರಾಬಾದ್ ಅಂಬರ್ರ ಪೇಟ್‌ನಲ್ಲಿ ಈ ಘಟನೆ ನಡೆದಿದ್ದು 17 ವರ್ಷದ ಆರೋಪಿಯು ಬಾಲಕಿಗೆ ಪ್ರೇಮ ನಿವೇದನೆಯ ಹೆಸರಿನಲ್ಲಿ ನಿರಂತರ ಕಿರುಕುಳ ನೀಡುತ್ತಿದ್ದನು. ಯುವಕನ ಪ್ರಮ ನಿವೇದನೆ ತಿರಸ್ಕರಿಸಿದ್ದ ಬಾಲಕಿಯನ್ನು ಚೂರಿಯಿಂದ ಇರಿದು ಕೊಲ್ಲಲು ಯತ್ನಿಸಿದ್ದಾನೆ. ಯುವಕ ಆರೋಪಿ ರಾತ್ರಿ ವೇಳೆ ಬಾಲಕಿಯ ಮನೆಗೆ ನುಗ್ಗಿ ಬಾಲಕಿಯೊಂದಿಗೆ ವಾಗ್ವಾದ ನಡೆಸಿದ್ದಾನೆ. ವಾಗ್ವಾದ ತೀವ್ರಗೊಳ್ಳುತ್ತಿದ್ದಂತೆ, ಆರೋಪಿ ಅಡುಗೆಮನೆಯಿಂದ ಚಾಕುವನ್ನು ತೆಗೆದುಕೊಂಡು ಬಾಲಕಿಗೆ ಯದ್ವಾತದ್ವಾ ಇರಿದು ಪರಾರಿಯಾಗಿದ್ದಾನೆ. ಬಾಲಕಿಯ ರಕ್ಷಣೆಗೆ ಬಂದ ಇನ್ನೊಬ್ಬ ಹುಡುಗಿಯ ಮೇಲೂ ಈ ಪಾಗಲ್ ಪ್ರೇಮಿ ದಾಳಿ ನಡೆಸಿದ್ದು ಯುವತಿ ಗಾಯಗೊಂಡಿದ್ದಾಳೆ. ಗಾಯಾಳುಗಳನ್ನು ಆಸಪತ್ರೆಗೆ ದಾಖಲಿಸಲಾಗಿದೆ. ಬಾಲಕಿಯ ಕುಟುಂಬ ಪೊಲೀಸರಿಗೆ ದೂರು ನೀಡಿದ ನಂತರ, ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದದಾಗ ಆರೋಪಿ ಯುವಕ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply