LATEST NEWS
ಕುಮಾರ್ ಬಂಗಾರಪ್ಪ ಮೀಟೂ ಆರೋಪಕ್ಕೆ ಸಿಎಂ ಕಿಡಿ
ಕುಮಾರ್ ಬಂಗಾರಪ್ಪ ಮೀಟೂ ಆರೋಪಕ್ಕೆ ಸಿಎಂ ಕಿಡಿ
ಉಡುಪಿ ಅಕ್ಟೋಬರ್ 30: ಕುಮಾರ ಬಂಗಾರಪ್ಪ ಅವರು ಕುಮಾರಸ್ವಾಮಿ ವಿರುದ್ದ ಮಾಡಿದ ಮೀಟೂ ಆರೋಪಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಗರಂ ಆಗಿದ್ದಾರೆ. ನನ್ನ ಪರ್ಸನಲ್ ವಿಷಯಗಳು ನಿಮಗ್ಯಾಕ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೈಂದೂರಿನಲ್ಲಿ ಮಾಧ್ಯಮಗಳು ಕುಮಾರ್ ಬಂಗಾರಪ್ಪ ಅವರ ಹೇಳಿಕೆಯನ್ನು ಪ್ರಸ್ತಾಪಿಸಿ ಪ್ರಶ್ನೆ ಕೇಳಿದ್ದಕ್ಕೆ, ಇದು ನನ್ನ ಪರ್ಸನಲ್ ವಿಷಯ ಇದು ನಿಮಗ್ಯಾಕ್ರಿ ಎಂದು ಪ್ರಶ್ನಿಸಿದರು. ನಾನು ಯಾವುದೇ ತಪ್ಪು ಮಾಡಿಲ್ಲ, ಚುನಾವಣೆ ಸಂದರ್ಭ ವಯಕ್ತಿಕ ವಿಚಾರ ಚರ್ಚೆ ಮಾಡಲ್ಲ, ರಾಜಕೀಯ ವಿಚಾರ ಇದ್ದರೆ ಚರ್ಚೆ ಮಾಡೋಣ ಎಂದು ಸವಾಲು ಹಾಕಿದರು.
ಕುಮಾರ ಬಂಗಾರಪ್ಪನ ಅಭಿರುಚಿ ಪ್ರದರ್ಶನವಾಗಿದ್ದು, ಈ ಬಗ್ಗೆ ಯಾವುದೇ ಮಾತನಾಡಲ್ಲ, ಚುನಾವಣೆ ಸಂದರ್ಭ ಅಭಿವೃದ್ಧಿ ವಿಚಾರ ಚರ್ಚೆಯಾಗಲಿ, ನನಗೆ ಎಲ್ಲವನ್ನೂ ಎದುರಿಸುವ ಸಾಮರ್ಥ್ಯ ಹೊಂದಿದ್ದೇನೆ ಎಂದರು.
ಬಂಗಾರಪ್ಪನ ಮಗನಾಗಿ ಕುಮಾರ್ ಬಂಗಾರಪ್ಪ ಜಿಲ್ಲೆಗೆ ಏನು ಮಾಡಿದ್ದಾರೆ, ರಾಜ್ಯಕ್ಕೆ ಕುಮಾರ ಬಂಗಾರಪ್ಪ ನ ಕೊಡುಗೆ ಏನು, ಕೇವಲ ಬಂಗಾರಪ್ಪ ಹೆಸರು ದುರುಪಯೋಗ ಪಡಿಸಿ ಮತ ಕೇಳುವ ಅವಶ್ಯಕತೆ ನಮಗಿಲ್ಲ ಎಂದು ಹೇಳಿದರು.
You must be logged in to post a comment Login