Connect with us

LATEST NEWS

ಕೃಷ್ಣ ಮಠಕ್ಕೆ ಬಾರದಿರುವುದು ಸ್ವಲ್ಪ ಬೇಸರವಾಗಿದೆ – ಪಲಿಮಾರು ಶ್ರೀ

ಕೃಷ್ಣ ಮಠಕ್ಕೆ ಬಾರದಿರುವುದು ಸ್ವಲ್ಪ ಬೇಸರವಾಗಿದೆ – ಪಲಿಮಾರು ಶ್ರೀ

ಉಡುಪಿ ಮೇ 1: ಪ್ರಧಾನಿ ನರೇಂದ್ರ ಮೋದಿ ಉಡುಪಿಗೆ ಬಂದು ಮಠಕ್ಕೆ ಬಾರದಿರುವುದಕ್ಕೆ ಸ್ವಲ್ಪ ಬೇಸರವಾಗಿದೆ ಎಂದು ಪಲಿಮಾರು ಶ್ರೀ ಹೇಳಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ಪ್ರಧಾನಿಗಳ ಬಗ್ಗೆ ಬಹಳ ಗೌರವವಿದೆ. ಮಠಕ್ಕೆ ಬರುತ್ತಾರೆ ಎಂದು ಪ್ರಧಾನಿಯವರು ಹೇಳಿರಲಿಲ್ಲ, ಆದರೂ ಉಡುಪಿಗೆ ಬಂದು ಮಠಕ್ಕೆ ಬಾರದಿದ್ದದ್ದು ಸ್ವಲ್ಪ ಬೇಸರವಾಗಿದೆ ಎಂದರು. ಸ್ಥಳೀಯ ಬಿಜೆಪಿ ನಾಯಕರು ಮೋದಿ ಬರಬಹುದು ಎಂದಿದ್ದರು, ಈ ಹಿನ್ನಲೆಯಲ್ಲಿ ಮಠದ ವ್ಯಾಪ್ತಿಯಲ್ಲಿ ಪೊಲೀಸರು ಭದ್ರತೆ ಮಾಡಿಕೊಂಡಿದ್ದರು, ಅಲ್ಲದೆ ಮೋದಿ ಆಗಮನಕ್ಕೆ ಸಣ್ಣಪುಟ್ಟ ಸಿದ್ಧತೆ ಕೂಡ ನಡೆದಿತ್ತು ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಪ್ರಧಾನಿಗಳು ಬರಬಹುದೆಂಬ ನಿರೀಕ್ಷೆಯಿದೆ, ನಮ್ಮ ಕಡೆಯಿಂದ ಸದಾ ಆಹ್ವಾನವನ್ನು ಕೊಡುತ್ತೇವೆ ಎಂದು ತಿಳಿಸಿದರು. ತಮ್ಮ ಭಾಷಣದಲ್ಲಿ ಕೃಷ್ಣಮಠ, ಪರಂಪರೆ ಬಗ್ಗೆ ಗೌರವದ ಮಾತು ಆಡಿದ್ದಾರೆ ನಮಗೆ ಸಂತೋಷವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *