Connect with us

    LATEST NEWS

    ತಲೆಗೆ ಗುಂಡು ಹಾರಿಸಿ ನ್ಯಾಯವಾದಿ ಆತ್ಮಹತ್ಯೆ

    ತಲೆಗೆ ಗುಂಡು ಹಾರಿಸಿ ನ್ಯಾಯವಾದಿ ಆತ್ಮಹತ್ಯೆ

    ಮಂಗಳೂರು,ಡಿಸೆಂಬರ್ 17 : ತಲೆಗೆ ಗುಂಡು ಹಾರಿಸಿಕೊಂಡು ನ್ಯಾಯವಾದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಸಂಪಾಜೆಯಲ್ಲಿ ನಡೆದಿದೆ.

    ಆತ್ಮಹತ್ಯೆ ಮಾಡಿಕೊಂಡವರು ಸುಳ್ಯದ ನ್ಯಾಯವಾದಿಯಾಗಿದ್ದ ಎನ್.ದೇವಿಚರಣ್ ಎಂದು ಗುರುತಿಸಲಾಗಿದೆ.

    ಇವರು ನಿನ್ನೆ ತಡರಾತ್ರಿ ಸಂಪಾಜೆಯ ತನ್ನ ಮನೆಯಲ್ಲಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.

    ಈ ವೇಳೆ ಮನೆಯಲ್ಲಿ ಇವರೊಬ್ಬರೇ ಇದ್ದರೆನ್ನಲಾಗಿದೆ.

    ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕೊಡಗು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply