LATEST NEWS
ಕುಂದಾಪುರ- ಕೃಷಿಗದ್ದೆಯ ನೀರು ತೆರವು ಮಾಡಲು ಹೋದ ಮಹಿಳೆ ಸಾವು
ಕುಂದಾಪುರ ಜುಲೈ 05: ಉಡುಪಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಬಾರೀ ಮಳೆಯಿಂದಾಗಿ ಆಕಸ್ಮಿಕವಾಗಿ ನೀರು ತುಂಬಿಕೊಂಡಿರುವ ಗದ್ದೆಗೆ ಬಿದ್ದು ಮಹಿಳೆಯೊಬ್ಬರು ಸಾವನಪ್ಪಿರುವ ಘಟನೆ ಕುಂದಾಪುರದ ಹಲ್ತೂರು ಎಂಬಲ್ಲಿ ನಡೆದಿದೆ.
ಮೃತರನ್ನು ಕೆಳಬೆಟ್ಟು ನಿವಾಸಿ ಶೀನ ಪೂಜಾರಿ ಎಂಬವರ ಪತ್ನಿ ಲಕ್ಷ್ಮೀ ಪೂಜಾರ್ತಿ (66) ಎಂದು ಗುರುತಿಸಲಾಗಿದ್ದು, ಇವರು ಗದ್ದೆಯಲ್ಲಿ ತುಂಬಿದ್ದ ಮಳೆ ನೀರು ಹರಿಯಲು ಜಾಗ ಮಾಡಲು ತೆರಳಿದ್ದರು, ಈ ವೇಳೆ ಆಯತಪ್ಪಿ ನೀರು ತುಂಬಿದ್ದ ಗದ್ದೆಗೆ ಬಿದ್ದು ಸಾವನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಕುಂದಾಪುರ ತಹಶೀಲ್ದಾರ್ ಭೇಟಿ ನೀಡಿದ್ದು, ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You must be logged in to post a comment Login