Connect with us

    FILM

    ಕವಿರತ್ನ ಕಾಳಿದಾಸ, ಅಂಜದ ಗಂಡು ನಿರ್ದೇಶಕ ರೇಣುಕಾ ಶರ್ಮಾ ಕರೊನಾಗೆ ಬಲಿ

    ಬೆಂಗಳೂರು, ಮೇ 06​: ಕರೊನಾ ವೈರಸ್​ನಿಂದ ಪ್ರತಿಭಾವಂತರನ್ನೇ ಕಳೆದುಕೊಳ್ಳುವ ಮೂಲಕ ಚಿತ್ರರಂಗ ಬಡವಾಗುತ್ತಿದೆ. ಪ್ರತಿದಿನ ಒಂದಲ್ಲ ಒಂದು ಸಾವು ಚಿತ್ರರಂಗದಲ್ಲಿ ಸಂಭವಿಸುತ್ತಿದ್ದು, ಭಾರತೀಯ ಚಿತ್ರರಂಗಕ್ಕೆ ಶಾಕ್​ ಮೇಲೆ ಶಾಕ್​ ಎದುರಾಗುತ್ತಿದೆ. ಇದೀಗ ಸ್ಯಾಂಡಲ್​ವುಡ್​ ಅನುಭವಿ ನಿರ್ದೇಶಕರೊಬ್ಬರು ಕರೊನಾಗೆ ಬಲಿಯಾಗಿದ್ದಾರೆ.

    ಕವಿರತ್ನ ಕಾಳಿದಾಸ, ಕಿಂದರಿ ಜೋಗಿ ಮತ್ತು ಅಂಜದ ಗಂಡು ಸೇರಿದಂತೆ ಮುಂತಾದ ಯಶಸ್ವಿ ಚಿತ್ರಗಳ ನಿರ್ದೇಶನ ಮಾಡಿದ್ದ ನಿರ್ದೇಶಕ ರೇಣುಕಾ ಶರ್ಮಾ ಕೋವಿಡ್​ಗೆ ಬಲಿಯಾಗಿದ್ದಾರೆ.

    ಕರೊನಾ ಪಾಸಿಟಿವ್​ ಆದ ಬೆನ್ನಲ್ಲೇ ಕುಟುಂಬಸ್ಥರು ರೇಣುಕಾ ಶರ್ಮಾರನ್ನು ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply