Connect with us

    FILM

    ರಿಷಬ್ ಶೆಟ್ಟಿ ಬೆಂಬಿಡದ ವರಾಹ ರೂಪಂ ಕೇಸ್..ಸದ್ಯಕ್ಕೆ ರಿಲೀಫ್ ಕೊಟ್ಟ ಸುಪ್ರೀಂ ಕೋರ್ಟ್

    ನವದೆಹಲಿ ಫೆಬ್ರವರಿ 10: ಕಾಂತಾರ ಸಿನೆಮಾ ರಿಲೀಸ್ ಆಗಿ ದೇಶದಾದ್ಯಂತ ಸೂಪರ್ ಹಿಟ್ ಆಗಿದೆ. ಆದರೆ ಸಿನೆಮಾದ ವರಾಹ ರೂಪಂ ಹಾಡಿನ ವಿವಾದ ಮಾತ್ರ ಇನ್ನೂ ಮುಂದುವರೆದಿದ್ದು, ಇದೀಗ ವರಾಹರೂಪಂ’ ಹಾಡಿನ ಕೃತಿಚೌರ್ಯ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ವಿನಾಯ್ತಿ ನೀಡಿದೆ.

    ಈ ಮೂಲಕ ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಮತ್ತು ನಿರ್ದೇಶಕ ಹಾಗೂ ನಾಯಕ ನಟ ರಿಷಬ್ ಶೆಟ್ಟಿ ನಿರಾಳರಾಗಿದ್ದಾರೆ. ಕಾಂತಾರ’ ಚಿತ್ರದ ‘ವರಾಹರೂಪಂ’ ಹಾಡನ್ನು ಪ್ರದರ್ಶಿಸಬಾರದು ಎಂದು ಕೇರಳ ಹೈಕೋರ್ಟ್ ವಿಧಿಸಿದ್ದ ಷರತ್ತನ್ನು ಸುಪ್ರೀಂ ಕೋರ್ಟ್ ಸಡಿಲಿಸಿದೆ. ಹಾಡಿನ ಮೇಲೆ ಹಕ್ಕುಸ್ವಾಮ್ಯ ಉಲ್ಲಂಘನೆ ಆರೋಪದ ತನಿಖೆಗೆ ವಿಜಯ್ ಕಿರಗಂದೂರು ಮತ್ತು ರಿಷಬ್ ಶೆಟ್ಟಿಯವರು ಫೆಬ್ರವರಿ 12 ಮತ್ತು 13ರಂದು ಹಾಜರಾಗುವ ವೇಳೆ ಅವರನ್ನು ಬಂಧಿಸಬಾರದೆಂದು ಸುಪ್ರೀಂ ಕೋರ್ಟ್ ಷರತ್ತು ವಿಧಿಸಿದೆ.

     

    Share Information
    Advertisement
    Click to comment

    You must be logged in to post a comment Login

    Leave a Reply