Connect with us

LATEST NEWS

ಜನಾರ್ಧನ ಪೂಜಾರಿಯವರನ್ನು ಭೇಟಿ ಮಾಡಿದ ಕಲ್ಲಡ್ಕ ಪ್ರಭಾಕರ್ ಭಟ್

ಜನಾರ್ಧನ ಪೂಜಾರಿಯವರನ್ನು ಭೇಟಿ ಮಾಡಿದ ಕಲ್ಲಡ್ಕ ಪ್ರಭಾಕರ್ ಭಟ್

ಮಂಗಳೂರು ಸೆಪ್ಟೆಂಬರ್ 28: ಕುದ್ರೋಳಿ ನವರಾತ್ರಿ ಉತ್ಸವದ ಸಂಭ್ರಮದಲ್ಲಿ ಆರ್ ಎಸ್ ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಭಾಗಿಯಾದರು. ಇಂದು ಸಂಜೆ ಆರೆಸ್ಸೆಸ್ ಮುಖಂಡ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಪತ್ನಿ ಸಮೇತರಾಗಿ ಕ್ಷೇತ್ರಕ್ಕೆ ಭೇಟಿ ನೀಡಿದರು.
ಇದೇ ವೇಳೆ ಕ್ಷೇತ್ರದಲ್ಲೇ ಇದ್ದ ಕಾಂಗ್ರೆಸ್ ಮುಖಂಡ ಬಿ.ಜನಾರ್ದನ ಪೂಜಾರಿ ಅವರನ್ನೂ ಭೇಟಿಯಾಗಿ ಕುಶಲ ವಿಚಾರಿಸಿದರು.
ಸುಮಾರು ಇಪ್ಪತ್ತಕ್ಕೂ ಹೆಚ್ಚು ಬೆಂಬಲಿಗರೊಂದಿಗೆ ಕಲ್ಲಡ್ಕ ಪ್ರಭಾಕರ ಭಟ್ ಕ್ಷೇತ್ರಕ್ಕೆ ಭೇಟಿ ನೀಡಿ ಶಾರದಾ ಮಾತೆ ಸೇರಿದಂತೆ ನವದುರ್ಗೆಯರಲ್ಲಿ ವಿಶೇಷ ಪ್ರಾರ್ಥನೆ  ಸಲ್ಲಿಸಿದರು.

ಅಂದಹಾಗೆ ಭಟ್ ಕುದ್ರೋಳಿ ಭೇಟಿ ನೀಡುವುದು ಇದೇ ಮೊದಲ ಬಾರಿಯೇನಲ್ಲ‌. ಕಳೆದ ಐದಾರು ವರ್ಷಗಳಿಂದ ನಿರಂತರ ವಾಗಿ ನವರಾತ್ರಿ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ಬೇಟಿ ನೀಡುತ್ತಾ ಬಂದಿದ್ದಾರೆ.

ಪತ್ನಿ ಡಾ.ಕಮಲಾ ಭಟ್ ಜತೆಗೆ

ಕ್ಷೇತ್ರಕ್ಕೆ ಭೇಟಿ ಮಾಡಿದ ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಹರಿಕೃಷ್ಣ ಬಂಟ್ವಾಳ ಸ್ವಾಗತಿಸಿದರು. ನಂತರ ಜನಾರ್ಧನ ಪೂಜಾರಿ ಅವರನ್ನು ಭೇಟಿ ಮಾಡಿದ ಪ್ರಭಾಕರ ಭಟ್ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿತ ಜನಾರ್ಧನ ಪೂಜಾರಿ ನಮ್ಮವರಿಂದ‌ ತಪ್ಪಾಗಿದೆ ನಿಮಗೆ ಬಹಳ ತೊಂದರೆಯಾಗಿದೆ ಎಂದು ಇದೇ ಸಂದರ್ಭದಲ್ಲಿ ವಿಷಾದ ಸೂಚಿಸಿದರು. ಕಲ್ಲಡ್ಕ‌ಶಾಲೆಗೆ ಕೊಲ್ಲೂರು ದೇವಸ್ಥಾನದ ಅನುದಾನ ಕಡಿತ ವಿಚಾರದಲ್ಲಿ ಪೂಜಾರಿ ಹಿಂದೆಯೂ ಸರ್ಕಾರವನ್ನು ಟೀಕಿಸಿದ್ದರು.

ಇದೇ ವೇಳೆ ಕುದ್ರೋಳಿ ದಸರಾವನ್ನು ‌ನಡೆಸಿಕೊಂಡು ಬಂದ ರೀತಿಯ ಬಗ್ಗೆ ಪ್ರಭಾಕರ ಭಟ್ ಮೆಚ್ಚುಗೆ ಸೂಸಿದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *