Connect with us

    LATEST NEWS

    ಅಕ್ರಮ ಸಂಬಂಧ ಸುಳ್ಳು ಎಂದು ಸಾಭೀತು ಪಡಿಸಲು ಪುರುಷನಿಗೆ ಅಗ್ನಿಪರೀಕ್ಷೆ….!!

    ತೆಲಂಗಾಣ ಮಾರ್ಚ್ 02: ರಾಮಾಯಣದಲ್ಲಿ ಸೀತೆ ತಾನು ಪವಿತ್ರಳು ಎಂದು ಸಾಭೀತು ಪಡಿಸಲು ಅಗ್ನಿಪರೀಕ್ಷೆ ಮುಂದಾದ ಕಥೆ ಕೇಳಿದ್ದೇವೆ, ಆದರೆ 21 ಶತಮಾನದಲ್ಲೂ ಇದೇ ರೀತಿಯ ಪರೀಕ್ಷೆ ಜಾರಿಯಲ್ಲಿದೆ ಅಂದರೆ ಆಶ್ಚರ್ಯವಾಗಬಹುದು, ನಿಜ, ತೆಲಂಗಾಣದಲ್ಲಿ ಇದೇ ರೀತಿಯ ಅಗ್ನಿಪರೀಕ್ಷೆ ನಡೆದಿದ್ದು, ಆದರೆ ಇಲ್ಲಿ ಮಾತ್ರ ಇದು ಒಬ್ಬ ಪುರುಷ ತನ್ನ ಮೇಲಿನ ಅಕ್ರಮ ಸಂಬಂಧದ ಆರೋಪ ವನ್ನು ಅಲ್ಲಗೆಳೆಯಲು ತಾನು ಅಗ್ನಿ ಪರೀಕ್ಷೆಗೆ ಒಳಗಾಗಿದ್ದಾನೆ.


    ತೆಲಂಗಾಣದ ಮುಳುಗು ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಇದೀಗ ಈ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಮುಳುಗು ಮಂಡಲದ ಬಂಜಾರುಪಲ್ಲಿಯ ಜಗನ್ನಾಥಂ ಗಂಗಾಧರ್ ಎಂಬಾತ ತನ್ನ ಪತ್ನಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿರುವುದಾಗಿ ಅದೇ ಗ್ರಾಮದ ಮತ್ತೊಬ್ಬ ವ್ಯಕ್ತಿ ತನ್ನ ಜಾತಿಯ ಹಿರಿಯರನ್ನು ಸಂಪರ್ಕಿಸಿದ್ದ. ಗಂಗಾಧರ್ ವಿರುದ್ಧ ದೂರು ದಾಖಲಿಸಿ ನ್ಯಾಯಕ್ಕಾಗಿ ಮನವಿ ಮಾಡಿದರು. ಈ ಹಿನ್ನಲೆಯಲ್ಲಿ ನಡೆದ ಪಂಚಾಯತ್ ನಲ್ಲಿ ಗಂಗಾಧರ ಮಹಿಳೆಗೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರೂ ಪಂಚಾಯಿತಿಯ ದೊಡ್ಡವರು ಕ್ಯಾರೇ ಎನ್ನಲಿಲ್ಲ.


    ಮೇಲಾಗಿ, ಪಂಚಾಯಿತಿಯನ್ನು ನಿರ್ವಹಿಸದೆ ಎರಡೂ ಪಕ್ಷಗಳಿಂದ ತಲಾ ರೂ.11 ಲಕ್ಷ ನಗದು ಠೇವಣಿಗಳನ್ನು ತೆಗೆದುಕೊಳ್ಳಲಾಗಿದೆ. ಮೂರು ತಿಂಗಳಿಂದ ಹಂತ ಹಂತವಾಗಿ ಪಂಚಾಯಿತಿಗಳನ್ನು ಆಯೋಜಿಸುತ್ತಿದ್ದರೂ ಸಮಸ್ಯೆ ಬಗೆಹರಿಯದ ಕಾರಣ ಇತ್ತೀಚೆಗೆ ದಿಢೀರ್ ನಿರ್ಧಾರ ಕೈಗೊಳ್ಳಲಾಗಿದ್ದು. ಗಂಗಾಧರ್ ಬೆಂಕಿಯಲ್ಲಿ ಕಾದ ಕಬ್ಬಿಣ ಸಲಾಖೆಯನ್ನು ಕೈಯಲ್ಲಿ ಹಿಡಿದು ತಾನು ಪ್ರಾಮಾಣಿಕ ಎಂದು ಸಾಭೀತು ಪಡಿಸಲು ಪಂಚಾಯತ್ ಆದೇಶಿಸಿತ್ತು. ಫೆಬ್ರವರಿ 25 ರಂದು ತೀರ್ಪು ಕಾರ್ಯಗತಗೊಂಡಿತು. ಉರುವಲು ರಾಶಿ ಹಾಕಿ ಅದರಲ್ಲಿ ಕಬ್ಬಿಣ ಸಲಾಖೆಯನ್ನು ಹಾಕಿ ಕೆಂಪಗೆ ಸುಟ್ಟಿದ್ದರು.

    ಸ್ನಾನ ಮಾಡಿ ಒದ್ದೆ ಬಟ್ಟೆಯಲ್ಲಿ ಬಂದ ಗಂಗಾಧರ ಕುಲುಮೆಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಎಲ್ಲರೂ ನೋಡುತ್ತಿರುವಾಗಲೇ ಉರಿಯುತ್ತಿದ್ದ ಸಲಿಕೆಯನ್ನು ಕೈಯಿಂದ ತೆಗೆದರು. ಕೈ ಸುಟ್ಟು ಹೋಗದ ಕಾರಣ ಗಂಗಾಧರ್ ಅಗ್ನಿಪರೀಕ್ಷೆಯನ್ನು ಪಾಸು ಮಾಡಿದರು. ಆದರೂ ಈ ವಿವಾದ ಮುಗಿಯದ ಕಾರಣ ಗಂಗಾಧರ್ ಅವರ ಪತ್ನಿ ಅದೇ ದಿನ ಮುಳುಗು ಪೊಲೀಸರಿಗೆ ದೂರು ನೀಡಿದ್ದಾರೆ. ಠೇವಣಿಯಾಗಿ ನೀಡಿದ ಹಣದಲ್ಲಿ ರೂ.6 ಲಕ್ಷ ಖರ್ಚು ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಗಂಗಾಧರ ದಂಪತಿ ದೂರಿನಲ್ಲಿ ತಿಳಿಸಿದ್ದಾರೆ

     

    Share Information
    Advertisement
    Click to comment

    You must be logged in to post a comment Login

    Leave a Reply