Connect with us

    LATEST NEWS

    ಗರಡಿ ಉತ್ಸವ ಮಾದರಿಯಾಗಿಸೋಣ: ವೇದವ್ಯಾಸ ಕಾಮತ್

    ಮಂಗಳೂರು: ತುಳುನಾಡಿನ ಕಾರಣೀಕ ಸಾನಿದ್ಯವಾದ ಕಂಕನಾಡಿ ಗರಡಿ ಬ್ರಹ್ಮಬೈದರ್ಕಳ ಕ್ಷೇತ್ರದ 150ನೇ ಸಂಭ್ರಮದ ಯಶಸ್ಸಿಗೆ ಜಿಲ್ಲಾಡಳಿತದ ಸಂಪೂರ್ಣ ಸಹಕಾರ ಅಗತ್ಯವಿದ್ದು, ಈ ಉತ್ಸವವನ್ನು ನಾವೆಲ್ಲ ಸವಾಲಾಗಿ ಸ್ವೀಕರಿಸಿ ಮಾದರಿ ಕಾರ್ಯಕ್ರಮವಾಗಿಸೋಣ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಹೇಳಿದರು.


    ಕಂಕನಾಡಿ ಗರಡಿಯಲ್ಲಿ ಬುಧವಾರ ಸಂಜೆ ಆಡಳಿತ ಮಂಡಳಿ, ಜಿಲ್ಲಾಡಳಿತ, ಮನಪಾ, ಪೊಲೀಸ್ ಇಲಾಖೆ ಸೇರಿದಂತೆ ಇತರ ಇಲಾಖಾ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಉತ್ಸವ ಹಿನ್ನಲೆಯಲ್ಲಿ ಸ್ಮಾರ್ಟ್ ಸಿಟಿ ರಸ್ತೆ ಕಾಮಗಾರಿ, ಪೊಲೀಸ್ ಇಲಾಖೆಯಿಂದ ಟ್ರಾಫಿಕ್ ವ್ಯವಸ್ಥೆ, ಪರ್ಯಾಯ ಸಂಚಾರ ವ್ಯವಸ್ಥೆ, ಸಿಸಿ ಕ್ಯಾಮೆರಾ ಅಳವಡಿಕೆ, ಆರೋಗ್ಯ ಇಲಾಖೆಯಿಂದ ಪ್ರಥಮ ಚಿಕಿತ್ಸೆ, ಅಂಬುಲೆನ್ಸ್ ವ್ಯವಸ್ಥೆ, ಶುಚಿತ್ವ ವ್ಯವಸ್ಥೆ, ಮೆಸ್ಕಾಂನಿಂದ ವಿದ್ಯುತ್ ಕಂಬಗಳ ಶಿಪ್ಟ್ ಸೇರಿದಂತೆ ಇತರ ವ್ಯವಸ್ಥೆ, ಅಗ್ನಿಶಾಮಕ ದಳದಿಂದ ಪಡೆ ನಿಯೋಜನೆ ಸೇರಿದಂತೆ ಇತರ ವ್ಯವಸ್ಥೆ ಗಳ ಬಗ್ಗೆ ನಿರ್ದೇಶನ ನೀಡಿದರು

     

    Share Information
    Advertisement
    Click to comment

    You must be logged in to post a comment Login

    Leave a Reply