LATEST NEWS
ಅಕ್ರಮ ಗೋಸಾಗಾಟದ ವಾಹನದ ಮೇಲೆ ಬಜರಂಗದಳ ಕಾರ್ಯಕರ್ತರ ದಾಳಿ…!!
ಮಂಗಳೂರು : ಅಕ್ರಮವಾಗಿ ಗೋವುಗಳನ್ನು ಸಾಗಾಟ ಮಾಡುತ್ತಿದ್ದ ವಾಹನದ ಮೇಲೆ ವಿಶ್ವಹಿಂದೂ ಪರಿಷತ್ ಬಜರಂಗದಳ ಉಜಿರೆ ಕಾರ್ಯಕರ್ತರು ದಾಳಿ ನಡೆಸಿ ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಮಾಹಿತಿ ಪಡೆದ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿ ಹೀನಾಯ ಸ್ಥಿತಿಯಲ್ಲಿದ್ದ ಎರಡು ದನಗಳನ್ನು ಹಾಗು ದನಸಾಗಟ ಮಾಡುತ್ತಿದ್ದ ಯಾವುದೇ ದಾಖಲೆಗಳಿಲ್ಲದ ಒಂದು ಪಿಕಪ್ ವಾಹನ ಮತ್ತು ಅದರಲ್ಲಿದ್ದ ಇಬ್ಬರನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ.
ಮನೆ ಮನೆಗೆ ಗುಜಿರಿ ಸಾಗಟದ ನೆಪದಲ್ಲಿ ದನ ಇದ್ದ ಮನೆಗಳ ಮಾಹಿತಿಯನ್ನು ನೀಡಿ ದನ ಸಾಗಿಸುವ ದಂದೆ ನಡೆಯುತ್ತಿದ್ದು ಇದಕ್ಕೆ ಪೋಲೀಸರು ಕಡಿವಾಣ ಹಾಕಬೇಕಿದೆ ಎಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.ಯ
You must be logged in to post a comment Login