KARNATAKA
ಹೃದಯಾಘಾತಕ್ಕೆ ಪ್ರೌಢಶಾಲಾ ವಿಧ್ಯಾರ್ಥಿನಿ ಬಲಿ….!!
ಚಿಕ್ಕಮಗಳೂರು ಅಕ್ಟೋಬರ್ 30: 14 ವರ್ಷ ಪ್ರಾಯದ ಫ್ರೌಢಶಾಲಾ ವಿಧ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ನಿಧನರಾದ ಘಟನೆ ಮೂಡಿಗೆರೆ ಪಟ್ಟಣದಲ್ಲಿ ನಡೆದಿದೆ. ಮೃತ ವಿಧ್ಯಾರ್ಥಿನಿಯನ್ನು ಮೂಲತಃ ಮಹಾರಾಷ್ಟ್ರದ, ಪ್ರಸಕ್ತ ಮೂಡಿಗೆರೆ ಪಟ್ಟಣದಲ್ಲಿ ವಾಸವಿರುವ ಸಂತೋಷ್ ಎಂಬವರ ಪುತ್ರಿ ವೈಷ್ಣವಿ(14) ಎಂದು ಗುರುತಿಸಲಾಗಿದೆ.
ಮೂಡಿಗೆರೆಯ ಬೆಥನಿ ಖಾಸಗಿ ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದ ವೈಷ್ಣವಿ ಶನಿವಾರ ಸಂಜೆ 7 ಗಂಟೆ ಸುಮಾರಿಗೆ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಹೆತ್ತವರು ಆಕೆಯ ನೇತ್ರ ದಾನ ಮಾಡಲು ನಿರ್ಧರಿಸಿದ್ದು, ಅದರಂತೆ ಆಸ್ಪತ್ರೆ ವೈದ್ಯರು ನೇತ್ರದಾನ ಪ್ರಕ್ರಿಯೆ ನೆರವೇರಿಸಿದರು.
ಮೃತಪಟ್ಟ ತಕ್ಷಣ ಕಣ್ಣು ದಾನ ಮಾಡಲು ಕುಟುಂಬಸ್ಥರು ಮುಂದಾಗಿದ್ದರು. ಮೃತ ಬಾಲಕಿ ಕಣ್ಣು ದಾನ ಮಾಡಲು ಮುಂದಾದ್ರೂ ಕೂಡ ಪಡೆಯಲು ಹಿಂದೇಟು ಆಸ್ಪತ್ರೆಯವರು ಬಂದಿರಲಿಲ್ಲ. ತಡರಾತ್ರಿಯಾದ್ರೂ ಕಣ್ಣು ದಾನ ಪಡೆಯಲು ಬಾರದ ಹಿನ್ನಲೆಯಲ್ಲಿ ಅಧಿಕಾರಿಗಳು ಹಾಗೂ ಸಂಸ್ಥೆಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.
You must be logged in to post a comment Login