Connect with us

    BANTWAL

    ಪಕ್ಷ ಬಿಟ್ಟರೂ ಗುರುವಿನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಹರಿಕೃಷ್ಣ ಬಂಟ್ವಾಳ್..!

    ಬಂಟ್ವಾಳ: ಕಾಂಗ್ರೇಸ್ ಪಕ್ಷ ಬಿಟ್ಟು ಬಿಜೆಪಿಯಲ್ಲಿ ಒಳ್ಳೆ ಹುದ್ದೆ ಪಡೆದು ತನ್ನನ್ನು ಈ ಸ್ಥಾನಕ್ಕೆ ಬೆಳೆಸಿದ ಗುರುವಿನ ಕಾಲಿಗೆ ಬಿದ್ದು ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಆಶೀರ್ವಾದ ಪಡೆದಿದ್ದಾರೆ. ಪೂಜಾರಿ ಅವರ ಆಪ್ತರಾಗಿದ್ದ ಹರಿಕೃಷ್ಣ ಬಂಟ್ವಾಳ್ ದಶಕಗಳಿಂದ ಕಾಂಗ್ರೆಸ್‌ ಪಕ್ಷದಲ್ಲಿದ್ದರು ಆದರೆ ಕಳೆದ ಕೆಲವರ್ಷಗಳ ಹಿಂದೆ ಕೆಲ ವೈಮನಸ್ಸಿನಿಂದ ಪಕ್ಷ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು.

    ನಂತರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಹರಿಕೃಷ್ಣ ಬಂಟ್ವಾಳ ಅವರನ್ನು ಬಿಜೆಪಿ ಕಿಯೋನಿಕ್ಸ್ ಅಧ್ಯಕ್ಷರನ್ನಾಗಿ ಮಾಡಿತ್ತು. ಬೆಂಗಳೂರಿನಲ್ಲಿ ಇತ್ತೀಚೆಗೆ ಕಿಯೋನಿಕ್ಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಹರಿಕೃಷ್ಣ ಬಂಟ್ವಾಳ ಊರಿಗೆ ಬಂದ ಕೂಡಲೇ ತನ್ನ ರಾಜಕೀಯ ಗುರುವಾಗಿದ್ದ ಕಾಂಗ್ರೆಸ್‌ ಹಿರಿಯ ಮುಖಂಡರಾಗಿರುವ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮನೆಗೆ ತೆರಳಿ ಪೂಜಾರಿ ಅವರ ಕಾಲಿಗೆ ಸಾಷ್ಟಾಂಗ ನಮಸ್ಕರಿಸಿ ಅವರ ಆಶೀರ್ವಾದ ಪಡೆದರು.

    ಪೂಜಾರಿ ಅವರು ಕೂಡ ಹಳೆಯದನ್ನು ಮರೆತು ಶಿಷ್ಯನನ್ನು ತುಂಬು ಮನಸ್ಸಿನಿಂದ ಆಶೀರ್ವಾದಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply