Connect with us

    DAKSHINA KANNADA

    ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆದ ಮಾಸ್ಕ್ ದಿನಾಚರಣೆ

    ಸುಳ್ಯ ಜೂನ್ 18: ಸರಕಾರದ ಆದೇಶದಂತೆ ರಾಜ್ಯಾದ್ಯಂತ ಮಾಸ್ಕ್ ದಿನಾಚರಣೆ ನಡೆಯುತ್ತಿದ್ದು ಸುಳ್ಯ ತಾಲೂಕು, ಕಡಬ ತಾಲೂಕು ಆಡಳಿತ, ತಾ.ಪಂ ಪಂಚಾಯತ್ ಆಶ್ರಯದಲ್ಲಿ ಸುಳ್ಯ, ಸುಬ್ರಹ್ಮಣ್ಯ, ಕಡಬ,ನೆಲ್ಯಾಡಿಯಲ್ಲಿ ಮಾಸ್ಕ್ ದಿನಾಚರಣೆ ನಡೆಯಿತು.


    ಸುಳ್ಯ ಮತ್ತು ಕಡಬದಲ್ಲಿ ಆಯಾ ಪ್ರದೇಶಗಳ ತಹಶೀಲ್ದಾರರುಗಳ ನೇತೃತ್ವದಲ್ಲಿ ಜಾಗೃತಿ ಜಾಥಾಗಳು ನಡೆಯಿತು. ಸುಳ್ಯ ತಹಶಿಲ್ದಾರರಾದ ಅನಂತ್ ಶಂಕರ್ ಸುಳ್ಯದಲ್ಲಿ ಮತ್ತು ಕಡಬ ತಹಶಿಲ್ದಾರರಾದ ಜಾನ್ ಪ್ರಕಾಶ್ ಕಡಬದಲ್ಲಿ ಜಾಥಾಕ್ಕೆ ಚಾಲನೆ ನೀಡಿದರು. ಸುಳ್ಯ, ಕಡಬ ತಹಶಿಲ್ದಾರರುಗಳು,ಆಯಾ ಪ್ರದೇಶಗಳ ಪೋಲೀಸ್ ಅಧಿಕಾರಿಗಳು ಸೇರಿದಂತೆ ಕಂದಾಯ ಇಲಾಖೆ ,ತಾಲೂಕು ಪಂಚಾಯತ್ ಸಿಬ್ಬಂದಿಗಳು,ಗ್ರಾಮ ಪಂಚಾಯತ್, ಆರೋಗ್ಯ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply