Connect with us

KARNATAKA

ಕಷ್ಟಪಟ್ಟು ಸಂಪಾದಿಸಿದ ರೂ. 25 ಸಾವಿರವನ್ನು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿಗೆ ಖರ್ಚಿಗೆ ನೀಡಿದ ಚುರುಮರಿ ವ್ಯಾಪಾರಿ..! 

ಚಿಕ್ಕಮಗಳೂರು ಜಿಲ್ಲೆಯ ತೇಗೂರು ಸರ್ಕಲ್ ನಲ್ಲಿರುವ ಚುರುಮುರಿ ಅಂಗಡಿಯ ವ್ಯಾಪಾರಿ ಲೋಕೇಶ್ ಬಾಬು ಎಂಬುವವರು ಎಲೆ-ಅಡಿಕೆ-ಬಾಳೆಹಣ್ಣುಗಳ ತಾಂಬೂಲದಲ್ಲಿ ತಾನು ಕಷ್ಟಪಟ್ಟು  ಸಂಪಾದಿಸಿದ 25 ಸಾವಿರ ರೂ. ಹಣ ಇಟ್ಟು ಕೋಟ ಶ್ರೀನಿವಾಸ್ ಪೂಜಾರಿಗೆ  ಶುಭ ಹಾರೈಸಿದ್ದಾರೆ. 

ಚಿಕ್ಕಮಗಳೂರು : ಲೋಕಸಭಾ ಚುನಾವಣಾ ಪ್ರಚಾರ ನಿಧಾನಕ್ಕೆ ರಂಗೇರುತ್ತಿದೆ. ತೀವ್ರ  ಕುತೂಹಲ ಕ್ಷೇತ್ರವಾಗಿರುವ ಉಡುಪಿ – ಚಿಕ್ಕಮಗಳೂರಿನಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಕೋಟಾ ಶ್ರೀನಿವಾಸ್ ಪೂಜಾರಿ ಅಖಾಡಕ್ಕಿಳಿದು ಪ್ರಚಾರ ಕಾರ್ಯ ಆರಂಭಿಸಿದರೆ ಕಾಂಗ್ರೆಸ್ ನಿಂದ ಜಯಪ್ರಕಾಶ್ ಹೆಗ್ಡೆ ಅವರು ಚುನಾವಣಾ ಕಣಕ್ಕಿ ಇಳಿದಿದ್ದಾರೆ.

ತಮ್ಮ ಚುನಾವಣಾ ಪ್ರಚಾರದ ಮಧ್ಯೆ ಚುರುಮುರಿ ಮಾರುವ ವ್ಯಾಪಾರಿಯೋರ್ವ ಚುನಾವಣಾ ಖರ್ಚಿಗೆಂದು  ಕೋಟ ಶ್ರೀನಿವಾಸ್ ಪೂಜಾರಿಗೆ ಹಣ ನೀಡಿದ ನೀಡಿದ ವಿದ್ಯಮಾನ ನಡೆದಿದೆ. ಚಿಕ್ಕಮಗಳೂರು ಜಿಲ್ಲೆಯ ತೇಗೂರು ಸರ್ಕಲ್ ನಲ್ಲಿರುವ ಚುರುಮುರಿ ಅಂಗಡಿಯ ವ್ಯಾಪಾರಿ ಲೋಕೇಶ್ ಬಾಬು ಎಂಬುವವರು ಎಲೆ-ಅಡಿಕೆ-ಬಾಳೆಹಣ್ಣುಗಳ ತಾಂಬೂಲದಲ್ಲಿ ತಾನು ಕಷ್ಟಪಟ್ಟು  ಸಂಪಾದಿಸಿದ 25 ಸಾವಿರ ರೂ. ಹಣ ಇಟ್ಟು  ಕೊಟ್ಟು ಶುಭ ಹಾರೈಸಿದ್ದಾರೆ.  ಪ್ರಚಾರ ಸಂದರ್ಭ ಮಾಜಿ ಶಾಸಕ ಸಿಟಿ ರವಿಯವರೊಂದಿಗೆ ಚುರುಮುರಿ ಅಂಗಡಿಗೆ ಭೇಟಿ ನೀಡಿದಾಗ ಈ ವಿದ್ಯಮಾನ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ದೊರೆತಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *