LATEST NEWS
ಪ್ರೋ. ನರೇಂದ್ರ ನಾಯಕ್ ಹತ್ಯೆಗೆ ಸ್ಕೆಚ್ – ಭದ್ರತೆ ಹೆಚ್ಚಳ
ಪ್ರೋ. ನರೇಂದ್ರ ನಾಯಕ್ ಹತ್ಯೆಗೆ ಸ್ಕೆಚ್ – ಭದ್ರತೆ ಹೆಚ್ಚಳ
ಮಂಗಳೂರು ಆಗಸ್ಟ್ 01: ಗೌರಿ ಲಂಕೇಶ್ ಹತ್ಯೆಯ ಆರೋಪಿಗಳಿಂದ ಸ್ಪೋಟಕ ಮಾಹಿತಿ ಹೊರ ಬಿದ್ದಿದ್ದು, ಮಂಗಳೂರಿನ ಖ್ಯಾತ ವಿಚಾರವಾದಿ ಪ್ರೊ.ನರೇಂದ್ರ ನಾಯಕ್ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ಎಂಬ ಮಾಹಿತಿ ಎಸ್ಐಟಿ ತನಿಖೆಯಿಂದ ಬಹಿರಂಗೊಂಡಿದೆ.
ತಮ್ಮ ಹತ್ಯೆಗೆ ಸ್ಕೆಚ್ ಹಾಕಲಾಗಿದ್ದ ವಿಚಾರ ಬಹಿರಂಗ ವಾದ ಹಿನ್ನೆಲೆಯಲ್ಲಿ ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮ ಪ್ರತಿ ನಿಧಿಗಳೊಂದಿಗೆ ಮಾತನಾಡಿದ ಪ್ರೊ.ನರೇಂದ್ರ ನಾಯಕ್ ‘ ನನ್ನನ್ನು ಕೊಲೆ ಮಾಡಲು ಹಲವು ವರ್ಷಗಳಿಂದ ಪ್ರಯತ್ನ ನಡೆಯುತ್ತಿದೆ. ನನ್ನ ಧ್ವನಿ ಅಡಗಿಸಲು ,ನನ್ನನ್ನು ಸೈಲೆಂಟ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ನಾನು ಸೈಲೆಂಟ್ ಆಗಬೇಕಾದರೆ ನನ್ನ ಹೆಣ ಮಲಗಬೇಕಷ್ಟೇ. ಒಂದು ವೇಳೆ ನನ್ನ ನಾಲಗೆ ಕತ್ತರಿಸಿದರೆ ಕೈಯಿಂದ ಬರೆಯುತ್ತೇನೆ. ನನ್ನ ಕೈ ಕತ್ತರಿಸಿದರೆ ಕಾಲಿನಿಂದ ಬರೆಯುತ್ತೇನೆ. ಆದರೆ ನನ್ನನ್ನು ತಡೆಯಲು ಸಾಧ್ಯವಿಲ್ಲ ಎಂದು ನಾನು ಓಪನ್ ಚಾಲೆಂಜ್ ಹಾಕ್ತೇನೆ ಎಂದು ಅವರು ಕಿಡಿಕಾರಿದರು.
You must be logged in to post a comment Login