Connect with us

    DAKSHINA KANNADA

    ಗೌರಿ ಲಂಕೇಶ್ ಹತ್ಯೆ 100 ದಿನ – ರಾಜ್ಯ ಸರಕಾರ ಸಿಬಿಐಗೆ ವಹಿಸದ ಮರ್ಮ ಏನು ?

    ಗೌರಿ ಲಂಕೇಶ್ ಹತ್ಯೆ 100 ದಿನ – ರಾಜ್ಯ ಸರಕಾರ ಸಿಬಿಐಗೆ ವಹಿಸದ ಮರ್ಮ ಏನು ?

    ಮಂಗಳೂರು ಜನವರಿ 3: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾಗಿ ಇಂದಿಗೆ 100 ದಿನ , ಆದರೆ ಈವರೆಗೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಭೇದಿಸುವಲ್ಲಿ ಪೊಲೀಸ್ ಇಲಾಖೆಗೆ ಸಾಧ್ಯವಾಗಿಲ್ಲ. ಹಲವಾರು ಕ್ಲಿಷ್ಟಕರ ಅತಿ ಸಂಕೀರ್ಣ ಪ್ರಕರಣಗಳನ್ನು ಬೇದಿಸುವಲ್ಲಿ ಯಶಸ್ವಿಯಾದ ರಾಜ್ಯ ಪೊಲೀಸರಿಗೆ ಈ ಪ್ರಕರಣವನ್ನು ಙೇದಿಸುವಲ್ಲಿ ಎದುರಾಗಿರುವ ಅಡೆ ತಡೆಯಾದರೂ ಏನು ಎಂಬ ಪ್ರಶ್ನೆ ಈಗ ಕಾಡಲಾರಂಭಿಸಿದೆ.

    ಈ ನಡುವೆ ರಾಜ್ಯ ಸರಕಾರದ ನಡೆಕೂಡ ಸಂಶಯ ಮೂಡಿಸಿದೆ. ಹೊನ್ನಾವರದಲ್ಲಿ ಪರೇಶ್ ಮೇಸ್ತ ಸಾವಿನ ಪ್ರಕರಣ ತನಿಖೆಯನ್ನು ರಾಜ್ಯ ಸರಕಾರ ಎರಡೇ ದಿನದಲ್ಲಿ ಸಿಬಿಐಗೆ ವಹಿಸಿತು. ಆದರೆ ವಿಚಾರವಾದಿಗಳ ಭಾರಿ ಒತ್ತಾಯದ ಮೇರೆಗೂ ರಾಜ್ಯ ಸರಕಾರ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸದೇ ಎಸ್ ಐಟಿಗೆ ವಹಿಸಿದೆ. ಈ ಹಿಂದೆ ವಿಚಾರವಾದಿ ಎಂ.ಎಂ. ಕಲ್ಬುರ್ಗಿ ಅವರ ಹತ್ಯೆ ನಡೆದಾಗಲೂ ತನಿಖೆಯ ವಿರುದ್ದ ಅಸಮಧಾನದ ಧ್ವನಿ ಕೇಳಿ ಬಂದಾಗ ರಾಜ್ಯ ಸರಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸದೇ ತನ್ನ ಅಧೀನದಲ್ಲಿರುವ ಸಿಐಡಿ ವಹಿಸಿತ್ತು. ಆದರೆ ಈ ಪ್ರಕರಣದ ತನಿಖೆ ನಡೆಸಿದ ಸಿಐಡಿ ತಂಡಕ್ಕೆ ಈವರೆಗೆ ಪ್ರಕರಣ ಭೇಧಿಸುವಲ್ಲಿ ಯಶಸ್ವಿಯಾಗಿಲ್ಲ. ಎಂ.ಎಂ. ಕಲ್ಬುರ್ಗಿ ಅವರ ಹತ್ಯೆ ಪ್ರಕರಣದ ತನಿಖೆ ಒಂದಿಂಚ್ಚು ಮುಂದೆ ಸಾಗಿಲ್ಲ.

    ಎಂ.ಎಂ. ಕಲ್ಬುರ್ಗಿ ಹತ್ಯೆ ಮಾದರಿಯಲ್ಲೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆಸಲಾಗಿದೆ. ಎರಡು ಪ್ರಕರಣಗಳಲ್ಲಿ ಕಂಟ್ರಿಮೇಡ್ ಪಿಸ್ತೂಲನೇ ಬಳಸಲಾಗಿದೆ. ಎರಡು ಪ್ರಕರಣಗಳಲ್ಲಿ ಸಾಮ್ಯತೆ ಇದೆ. ಎಸ್ ಐಟಿ ಹಾಗೂ ಸಿಐಡಿಗಳ ತಂಡ ತನಿಖೆಯಲ್ಲಿ ಮಾತ್ರ ಪ್ರಗತಿ ಕಂಡು ಬಂದಿಲ್ಲ.

    ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ 30 ಜನರ ಎಸ್ ಐಟಿ ತಂಡ ರಾಜ್ಯದ ಪ್ರಮುಖ ಕಾರಾಗೃಹಗಳಿಗೂ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ. ಆದರೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆಯಲ್ಲಿ ಪ್ರಗತಿ ಕಂಡು ಬಂದಿಲ್ಲ.

    ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡದ ಮೇಲೆ ತಮಗೆ ವಿಶ್ವಾಸವಿಲ್ಲ ಎಂದು ಗೌರಿ ಸಹೋದರ ಇಂದ್ರಜಿತ್ ಲಂಕೇಶ್ ಅಭಿಪ್ರಾಯ ವ್ಯಕ್ತಪಡಿಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸಿದರು.

    ಆದರೆ ರಾಜ್ಯ ಸರಕಾರ ಮಾತ್ರ ತನ್ನ ಎಸ್ ಐಟಿ ತಂಡದ ಮೇಲೆ ಜೋತು ಬಿದ್ದಿದೆ. ಹೊನ್ನಾವರದ ಪರೇಶ್ ಮತ್ತು ಪ್ರಕರಣವನ್ನು ಏಕಾಏಕಿ ಸಿಬಿಐಗೆ ವಹಿಸಿರುವ ರಾಜ್ಯ ಸರಕಾರಕ್ಕೆ ಗೌರಿ ಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸದಿರುವ ಮರ್ಮ ಏನು ? ಎಂಬ ಪ್ರಶ್ನೆ ಈಗ ಮೂಡಲಾರಂಭಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply