LATEST NEWS
ಕೊಲೆಗೆ ಹೊಂಚು ಹಾಕಿದ 5 ಮಂದಿ ಬಂಧನ- ತಪ್ಪಿದ ಭಾರಿ ದುಷ್ಕೃತ್ಯ
ಮಂಗಳೂರು ಅಗಸ್ಟ್ 29: ಮಂಗಳೂರಿನಲ್ಲಿ ಮತ್ತೆ ಹಿಂಸಾಚಾರಕ್ಕೆ ನಡೆಸುವ ಉದ್ದೇಶದಿಂದ, ಮಾರಕಾಸ್ತ್ರಗಳೊಂದಿಗೆ ದುಷ್ಕೃತ್ಯ ಎಸಗಲು ಸ್ಕೆಚ್ ರೂಪಿಸಿದ್ದ ಐದು ಮಂದಿ ದುಷ್ಕರ್ಮಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮದನಿ ನಗರದ ತಸ್ಲೀಂ (21)ಪವಾಝ್( 22) ಕುರ್ಷಿದ್(23) ರಮೀಝ್(21) ಎಲ್ಯಾರ್ ಪದವಿನ ನೌಷಾದ್(31) ಎಂದು ಗುರುತಿಸಲಾಗಿದೆ.
ಉಳ್ಳಾಲದ ಮದನಿ ನಗರದ ಗ್ಯಾರೇಜ್ ಯೊಂದರ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಿಂದ ಮಚ್ಚು ,ರಾಡು ,ಮೆಣಸಿನ ಹುಡಿ ,ಚೂರಿಯನ್ನು ವಶಪಡಿಸಿಕೊಳ್ಳಲಾಗಿದೆ .
ಬಂಧಿತ ಆರೋಪಿಗಳು ಕೊಲೆ ನಡೆಸುವ ಉದ್ದೇಶ ಹೊಂದಿದ್ದರು ಎಂದು ಹೇಳಲಾಗಿದೆ .ಆರೋಪಿಗಳು ಯಾರನ್ನು ಕೊಲೆ ಮಾಡುವ ಉದ್ದೇಶ ಹೊಂದಿದ್ದರು ಎನ್ನುವ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ . ಪೊಲೀಸರ ಮಿಂಚಿನ ಕಾರ್ಯಾಚರಣೆಯಿಂದ ಭಾರೀ ದುಷ್ಕೃತ್ಯ ವೊಂದು ತಪ್ಪಿದಂತಾಗಿದೆ.
You must be logged in to post a comment Login