LATEST NEWS
ಅಪಾರ್ಟ್ಮೆಂಟ್ ನ್ನ ಗ್ಯಾಸ್ ಚೆಂಬರ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಮೂವರು..!!
ನವದೆಹಲಿ ಮೇ 22: ತಮ್ಮ ಅಪಾರ್ಟ್ಮೆಂಟ್ ನ್ನ ಗ್ಯಾಸ್ ಚೆಂಬರ್ ರೀತಿ ಮಾಡಿಕೊಂಡು ಆತ್ಮಹತ್ಯೆಗೆ ತಾಯಿ ಸೇರಿದಂತೆ ಇಬ್ಬರು ಹೆಣ್ಮು ಮಕ್ಕಳು ಆತ್ಮಹತ್ಯೆಗೆ ಶರಣಾದ ಘಟನೆ ನವದೆಹಲಿಯಲ್ಲಿ ನಡೆದಿದೆ. ವಸಂತ್ ವಿಹಾರ್ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಮಂಜುಳ (50) ಅವರ ಪುತ್ರಿಯರಾದ ಅಸ್ಮಿಕಾ (27), ಅಂಜು (26) ಮೃತಪಟ್ಟಿದ್ದಾರೆ.
ಮಂಜುಳ ಅವರ ಪತಿ ಕೊರೊನಾದಿಂದ ನಿಧನರಾಗಿದ್ದು, ಇದರಿಂದಾಗಿ ಮಹಿಳೆಯ ಮತ್ತು ಮಕ್ಕಳು ಖಿನ್ನತೆಗೆ ಒಳಗಾಗಿದ್ದರು. ಹಿನ್ನಲೆ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕಾಗಿ ಅವರು ಗ್ಯಾಸ್ ಸಿಲಿಂಡ್ ಆನ್ ಮಾಡಿದ್ದರು. ಕಿಟಕಿ, ಬಾಗಿಲುಗಳಿಗೆ ಗ್ಯಾಸ್ ಹೊರ ಹೋಗದಂತೆ ಟೇಪ್ ಅಂಟಿಸಿದ್ದರು. ಮನೆಯನ್ನು ತುಂಬಿಕೊಂಡಿದ್ದ ಕಾರ್ಬನ್ ಮಾನಾಕ್ಸೈಡ್ ಸೇವಿಸಿ ಮೃತಪಟ್ಟಿದ್ದಾರೆ. ಒಂದೇ ರೂಮಿನಲ್ಲಿ ಮೂರು ಮೃತದೇಹಗಳು ಪತ್ತೆಯಾಗಿವೆ. ಹಾಗೂ ಅದೇ ರೂಮಿನಲ್ಲಿ ಅಗ್ನಿಕುಂಡ, ಕ್ಯಾಂಡಲ್ಗಳು ಪತ್ತೆಯಾಗಿವೆ.
ನೆರೆ ಹೊರೆಯವರು ಮತ್ತು ಪೊಲೀಸರು ಮನೆಯೊಳಗೆ ಪ್ರವೇಶಿಸಿದಾಗ ಗ್ಯಾಸ್ ಹಬ್ಬಿಕೊಂಡಿರುವುದರಿಂದ ಬೆಂಕಿಕಡ್ಡಿ ಅಥವಾ ಲೈಟರ್ಗಳನ್ನು ಬಳಸಬೇಡಿ ಎಂದು ಡೆತ್ ನೋಟ್ನಲ್ಲಿ ಬರೆಯಲಾಗಿತ್ತು. ಆತ್ಮಹತ್ಯೆಗಾಗಿಯೇ ಅವರು ಆನ್ಲೈನ್ ಮೂಲಕ ಅಗ್ನಿಕುಂಡ ಹಾಗೂ ಕಲ್ಲಿದ್ದಲು ತರಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
You must be logged in to post a comment Login