Connect with us

    LATEST NEWS

    ಮಂಗಳೂರಿನ ಉದ್ಯಮಿಯೊಬ್ಬರಿಗೆ ಭೂಗತಪಾತಕಿಯಿಂದ ಹಫ್ತಾಕ್ಕಾಗಿ ಬೆದರಿಕೆ ಕರೆ

    ಮಂಗಳೂರಿನ ಉದ್ಯಮಿಯೊಬ್ಬರಿಗೆ ಭೂಗತಪಾತಕಿಯಿಂದ ಹಫ್ತಾಕ್ಕಾಗಿ ಬೆದರಿಕೆ ಕರೆ

    ಮಂಗಳೂರು ಮಾರ್ಚ್ 26: ಮಂಗಳೂರಿನ ಉದ್ಯಮಿಯೊಬ್ಬರಿಗೆ ಭೂಗತಪಾತಕಿಯಿಂದ ಹಫ್ತಾಕ್ಕೆ ಬೆದರಿಕೆ ಕರೆ ಬಂದಿರುವ ಘಟನೆ ನಡೆದಿದೆ.

    ಮಂಗಳೂರಿನ ಪಂಪ್ ವೆಲ್ ನಲ್ಲಿರುವ ಭಾರತ್ ಆಗ್ರೋವೆಟ್ ಇಂಡಸ್ಟ್ರೀಸ್‍ನ ಮಾಲಕ ಡಾ. ಅರುಣ್ ಕುಮಾರ್ ರೈಗೆ ಭೂಗತ ಪಾತಕಿಯಿಂದ ಹಫ್ತಾಕ್ಕಾಗಿ ಬೆದರಿಕೆ ಕರೆ ಬಂದಿದೆ.

    ಉದ್ಯಮಿ ಡಾ. ಅರುಣ್ ಕುಮಾರ್ ರೈಗೆ ಕಲಿಯೋಗೀಶ ಎಂದು ಪರಿಚಯಿಸಿಕೊಂಡ ವ್ಯಕ್ತಿಯಿಂದ ಮಾರ್ಚ್ 17ರಿಂದ ಮಾರ್ಚ್ 23ರವರೆಗೆ ನಾನಾ ಇಂಟರ್‍ನೆಟ್ ನಂಬರ್ ಗಳಿಂದ ಬೆದರಿಕೆ ಕರೆ ಬಂದಿದೆ ಎಂದು ಹೇಳಲಾಗಿದೆ. ಈ ಕರೆಯಲ್ಲಿ 50ಲಕ್ಷ ರೂಪಾಯಿ ಹಫ್ತಾ ನೀಡಬೇಕು ಎಂದು ಉದ್ಯಮಿಯಲ್ಲಿ ಬೇಡಿಕೆ ಇರಿಸಿದ್ದಾರೆ ಎಂದು ಹೇಳಲಾಗಿದ್ದು, ಹಣ ನೀಡದಿದ್ದಲ್ಲಿ ಶೂಟರ್ ಹುಡುಗರನ್ನು ಕಚೇರಿಗೆ ಕಳುಹಿಸುವುದಾಗಿ ಧಮ್ಕಿ ಹಾಕಿದ್ದಾರೆ. ಈ ಘಟನೆ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕರೆಯ ದಾಖಲೆಯ ಆಧಾರದಲ್ಲಿ ತನಿಖೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply