LATEST NEWS
ಆಹಾರದಲ್ಲಿ ವಿಷ ಹಾಕಿ ನಾಯಿಗಳ ಮಾರಣಹೋಮ
ಉಳ್ಳಾಲ ಅಗಸ್ಟ್ 17 : ವ್ಯಕ್ತಿಯೊಬ್ಬ ಆಹಾರದಲ್ಲಿ ವಿಷ ಹಾಕಿ ಹಲವಾರು ನಾಯಿಗಳನ್ನು ಸಾಯಿಸಿದ ಘಟನೆ ತಲಪಾಡಿ ಅಲಂಕಾರುಗುಡ್ಡೆ ಎಂಬಲ್ಲಿ ನಡೆದಿದ್ದು, ಅಪರಿಚಿತನ ಈ ಕೃತ್ಯ 9ಕ್ಕೂ ಅಧಿಕ ನಾಯಿಗಳು ಸಾವನಪ್ಪಿದ್ದು, ಒಂದು ದನ ಕೂಡ ಸಾವನಪ್ಪಿದೆ.
ಅಪರಿಚಿತನೊಬ್ಬ ರಸ್ತೆ ಬದಿಯಲ್ಲಿ ನಾಯಿಗಳಿಗೆ ಆಹಾರ ಹಾಕುತ್ತಾ ಹೋಗಿದ್ದ. ನಂತರದ ದಿನಗಳಲ್ಲಿ ಅಲ್ಲಲ್ಲಿ ನಾಯಿಗಳು ಸತ್ತುಬಿದ್ದಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೆಲವು ನಾಯಿಗಳ ಕಳೇಬರ ಕೊಳೆತು ದುರ್ನಾತ ಬೀರುತ್ತಿದೆ. ಕೆಲವು ನಾಯಿಗಳನ್ನು ಸ್ಥಳೀಯರು ಮಣ್ಣಲ್ಲಿ ಹೂತಿದ್ದಾರೆ. ಅಲಂಕಾರುಗುಡ್ಡೆ ನಿವಾಸಿ ಸತ್ಯೇಂದ್ರ ಎಂಬವರಿಗೆ ಸೇರಿದ ಹಾಲು ನೀಡುವ ದನ ಹಾಗೂ ಸ್ಥಳೀಯರ ನಾಯಿಗಳು ಎರಡು ದಿನಗಳಲ್ಲಿ ಅಸುನೀಗಿವೆ. ಈ ಕೃತ್ಯದ ಕುರಿತು ಉಳ್ಳಾಲ ಪೊಲೀಸ್ ಠಾಣೆಗೆ ಸ್ಥಳೀಯರು ದೂರು ನೀಡಿದ್ದಾರೆ.
You must be logged in to post a comment Login