LATEST NEWS
ದಿನಕ್ಕೊಂದು ಕಥೆ- ಕಿಡಿ
ಕಿಡಿ
ಬೆಂಕಿಯ ಕಿಡಿ ಹುಟ್ಟಿದ್ದೆಲ್ಲಿ ಅನ್ನೋದರ ಅರಿವಿಲ್ಲ .ಆದರೆ ಕೆನ್ನಾಲಿಗೆ ಜಾಗವನ್ನೆಲ್ಲಾ ಆಕ್ರಮಿಸಿ ವಿಕೃತಿ ಮೆರೆಯುತ್ತಿದೆ . ಹಚ್ಚಿದವರೆಲ್ಲಾ ಬಿಸಿಗೆ ಕಾಯಿಸಿಕೊಳ್ಳುತ್ತಿದ್ದಾರೆ. ಶಾಖದೊಳಗೆ ಉರಿದು ಬೆಂದವರ ಬೂದಿಗಳು ಊರು ಬಿಟ್ಟು ಹಾರಿದವು, ಗಗನದೆತ್ತರಕ್ಕೆ .ಊರಿನ ಹೆಸರು “ಮುರುಗಪುರ” ರಕ್ತವೇ ಜೀವಾಳ ಅವಳ ಬದುಕಿಗೆ.
ಮಾತ್ರ ಅಲ್ಲ ಕಲೆಗಳಲ್ಲ ಕಾಯುತ್ತಿವೆ ವಿಜೃಂಭಿಸಲು ಕಾಲ ಕಾರಣ. ಬದಲಾಯಿತು ಜಗಳಕ್ಕೆ ಕಾರಣ ಹುಡುಕುತ್ತಾರವರು, ಮಸಣಗಳು ತುಂಬಿ ಚರಂಡಿಗಳ ಮೈದಾನಗಳ ನಡುವೆ ಕೆಲವು ಉಳಿದಿಲ್ಲ ಜಾಗ ಉಳಿಯೋದಿಲ್ಲ. ಊರಿನ ಮಧ್ಯೆ ಎರಡು ಮನೆಯ ಕಿಟಕಿ ಬಾಗಿಲು ಮುಚ್ಚಿದೆ ಜಾತಿಗಿಂತ ಉಸಿರು ಉಳಿಸಿಕೊಳ್ಳುವುದೇ ಮುಖ್ಯವಾಗುತ್ತಿದೆ ಎರಡು ಮನೆ ಮನೆಗಳು ಒಂದಾದ ಹಾಡಿನ ನಡುವೆ ಹಸಿವು ಮರೆತು ದುಡಿದು ಎಲ್ಲವನ್ನೂ ಎಲ್ಲರನ್ನು ಬದುಕಿಸಿತು.
ಊರು ಉರಿಯುತ್ತಿರುವಾಗ ಅವರು ಮನೆ ಬಿಟ್ಟು ಹೊರಗೆ ಕಲ್ಲಿನ ಸೇತುವೆ ದಾಟಿ ಶಹರದೊಳಕೆ ಕಾಲಿಟ್ಟರು. ಸಂಗೀತದ ಪಯಣಕ್ಕೆ ಅಂಬೆಗಾಲಿಟ್ಟು ಹಾಡಿನ ಶ್ರುತಿಗೆ ತಬಲ ಒಪ್ಪಿಗೆಯಾಗಿ ಜನರ ಮನಸೂರೆಗೊಂಡಿತು ಊರು ಸುಟ್ಟಿದೆ ಇಲ್ಲಿ ಜಾತಿ ಕುಲಗೋತ್ರಗಳನ್ನು ಮರೆತು ಹಾಡನ್ನ ಆಸ್ವಾದಿಸಲು ಹೆಚ್ಚಾಗಿದ್ದಾರೆ .ಅರ್ಥವಿರುವ ಹಾಡನ್ನು ಮನದುಂಬಿ ಹಾಡಿದ್ದರಿಂದ ಜಗಳ ನಿಂತಿದೆ ಸಾವು ಬದುಕಿದೆ .ಹಾಡು ತಾಳದೊಂದಿಗೆ ಒಪ್ಪಿತು ಇಂದಿನವರೆಗೂ ರಾಗಕ್ಕೂ ತಾಲೂಕು ಜಾತಿ ವೈಷಮ್ಯದ ಬೀಜವಿಲ್ಲ ಅದು ಚಿಗುರೊಡೆಯುವುದು ಇಲ್ಲ ಏನು ಮರೆವು ಆಗೋದಿಲ್ಲ
ಧೀರಜ್ ಬೆಳ್ಳಾರೆ
You must be logged in to post a comment Login