LATEST NEWS
ದಿನಕ್ಕೊಂದು ಕಥೆ – ಅವಸರ
ಅವಸರ
ಅಲ್ಲಿಯ ಬಾಗಿಲು ಮುಚ್ಚಲಾಗಿದೆ .ಎಷ್ಟು ಬೇಡಿದರೂ ಒಳ ಬಿಡುತ್ತಿಲ್ಲ. ಒಳಗೆ ಪಾದವಿರಿಸುವ ಅರ್ಹತೆ ಸಂಪಾದಿಸದಿದ್ದರೆ ಬಾಗಿಲ ಬಳಿ ಬಂದವರನ್ನು ತಿರಸ್ಕರಿಸುತ್ತಾರೆ. ಬಾಗಿಲು ದಾಟಿ ಒಳಹೊಕ್ಕರೆ ಸಾಕು ಅದೊಂದು ಅದ್ಭುತ ಪ್ರಪಂಚ. ಮಿನುಗುವ ತಾರೆಗಳ ಉಸಿರ ತಿಳಿಯುವ ಸುಗಂಧಭರಿತ ತಾಣ .
ಅಲ್ಲಿ ಸುಖಿಸುತ್ತಿರುವ ಹಲವು ಚೇತನಗಳಿವೆ .ಹಾಗೆಯೇ ಹೊರಗೆ ದುಃಖಿಸುತ್ತಿರುವ ಮನಸ್ಸುಗಳೂ ಇವೆ. ದ್ವಾರಪಾಲಕರಿಗೆ ನೇರವಾಗಿ ಆದೇಶವಾಗಿದೆ “ಕಪ್ಪುಪಟ್ಟಿ ಧರಿಸಿ ಬರೋರನ್ನ ಒಳ ಬಿಡಬೇಡಿ”. ಆ ಪಟ್ಟಿಯನ್ನು ಯಾರೂ ಆಂಟಿಸಿದ್ದಲ್ಲ .ಬೇಡ ಎಂದು ಕಿತ್ತುಹಾಕೋಕು ಬರುವುದಿಲ್ಲ .
ಸುಂದರ ಭೂಮಿಯಲ್ಲಿ ಬದುಕನ್ನು ತೊರೆದು, ಎದುರಿಸಲಾಗದೇ, ಆತ್ಮವನ್ನು ಬೇರ್ಪಡಿಸಿ ಹೊರಟವರಿಗೆ ಕಪ್ಪುಪಟ್ಟಿ ತಾನಾಗಿಯೇ ಅಂಟುತ್ತದೆ .ಗುರಿಗೆ, ಸಾಧನೆಗೆ ಅವಸರವನ್ನು ಒಪ್ಪಬಹುದು ಸಾವಿಗೇಕೆ ಅವಸರ. ಸತ್ತು ಸಾಧಿಸುವುದೇನು ?.ಬದುಕಿ ತೋರಿಸಲಾಗದೆ ಹೇಡಿ ಮರಣವ ಬೆಂಬಲಿಸುವವರಾರಿಲ್ಲ .
ಭಗವಂತ ಮುತುವರ್ಜಿಯಿಂದ ಸಮಯ ಕೊಟ್ಟು ಬದುಕ ನೀಡಿ ರೂಪಿಸಿ ನಮ್ಮ ಕಳಿಸಿರುವಾಗ ಭೂಮಿಗೆ ,ಅವ ನಮ್ಮೊಳಗೆ ಸ್ಥಾಯಿಯಾಗಿರುವ . ಜೀವವನ್ನ ತೊರೆದು ಓಡಿಸುವ ಇರಾದೆ ಏಕೋ ಗೊತ್ತಿಲ್ಲ ? ಆ ಬಾಗಿಲೊಳಗೆ ದೇವ ದುಃಖಿಸಿದ್ದಾನೆ.
ಭೂಮಿಗೆ ಕಳುಹಿಸಿದ ಕಾರಣವ ತೊರೆದು ಬಂದಾಗ ಒಳ ಸೇರಿಸದೇ ಹೊರಗಿಟ್ಟಿದ್ದಾನೆ. ಅವನೊಳಗೆ ಸಾಗಲು ಕಾಲ ಬರಲಿ ,ಅವನೇ ಕರೆಯಲಿ ,ಕರೆ ಬರದೇ ನಾವೇ ಸೃಷ್ಟಿಸಿದರೆ ಹೊರಗಡೆ ಕಾಯುತ್ತಲೇ ಇರಬೇಕಾಗುತ್ತದೆ.
You must be logged in to post a comment Login