Connect with us

    FILM

    ಜೈಲ್ ನಲ್ಲಿ ಊಟ ಸರಿಯಿಲ್ಲ ಎಂದ ನಟ ದರ್ಶನ್ ಗೆ ರಾಜ್ಯಾತಿಥ್ಯ -ಪೋಟೋ ವೈರಲ್

    ಬೆಂಗಳೂರು ಅಗಸ್ಟ್ 25: ತನ್ನದೇ ಅಭಿಮಾನಿ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಜೈಲಿನಲ್ಲಿ ಆರಾಮಾಗಿರುವ ಪೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಊಟ ಸರಿಯಿಲ್ಲ ಎಂದು ಕೋರ್ಟ್ ಮೊರೆ ಹೋಗಿದ್ದ ದರ್ಶನ್ ಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗಿದೆ.


    ಪರಪ್ಪನ ಅಗ್ರಹಾರದಲ್ಲಿರುವ ಆರೋಪಿ ನಟ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ. ಇದಕ್ಕೆ ಪೂರಕವಾಗಿ ಫೋಟೋವೊಂದು ಲಭ್ಯವಾಗಿದೆ. ಈ ಫೋಟೋದಲ್ಲಿ ದರ್ಶನ್‌ ಜೈಲಿನ ಬ್ಯಾರಕ್‌ನಿಂದ ಹೊರಗೆ ರೌಡಿಗಳ ಜೊತೆ ಕುಳಿತು ಸಿಗರೇಟ್ ಸೇದುತ್ತಿರುವುದು ಕಂಡುಬಂದಿದೆ. ವಿಲ್ಸನ್ ಗಾರ್ಡನ್ ನಾಗನ ಜೊತೆ ದರ್ಶನ್ ಕುಳಿತಿದ್ದಾರೆ. ಒಂದು ಕೈಯಲ್ಲಿ ಸಿಗರೇಟ್‌, ಮತ್ತೊಂದು ಕೈಯಲ್ಲಿ ಕಾಫಿ ಮಗ್‌ ಹಿಡಿದು ದರ್ಶನ ಕುಳಿತಿದ್ದಾರೆ.

    ಫೋಟೋ ಬೆಳಕಿಗೆ ಬರುತ್ತಿದ್ದಂತೆ ಇದೇನು ಜೈಲಾ ಇಲ್ಲ ರೆಸಾರ್ಟಾ? ಅನ್ನೋ ಪ್ರಶ್ನೆ ಎದ್ದಿದೆ. ಜೈಲಿನಲ್ಲಿ ಎಲ್ಲವೂ ಖುಲ್ಲಂ ಖುಲ್ಲ, ʻಜೈಲುʼ ಅನ್ನೋದು ಉಳ್ಳವರಿಗೆ ಎಲ್ಲಾ ಸವಲತ್ತು ನೀಡುವ ಕಾಮಧೇನು? ದುಡ್ಡು ಕೊಟ್ರೆ ಏನೂ ಬೇಕಾದ್ರೂ ಸಿಗುತ್ತೆ ಅನ್ನೋದಕ್ಕೆ ಈ ಫೋಟೋವೊಂದು ಕನ್ನಡಿಯಂತಾಗಿದೆ. ದರ್ಶನ್‌ ಅವರ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಂತೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಆದ್ರೆ ದರ್ಶನ್‌ ಅಭಿಮಾನಿಗಳು ಎಂದಿನಂತೆ ಸಮರ್ಥಿಸಿಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply