Connect with us

    LATEST NEWS

    25 ವರ್ಷಗಳ ಬಳಿಕ ಮತ್ಸ್ಯಗಂಧ ರೈಲಿಗೆ ಹೊಸ ಕೋಚ್ – ಫೆಬ್ರವರಿಯಲ್ಲಿ ಸಾಧ್ಯತೆ…!!

    ಮಂಗಳೂರು ಅಕ್ಟೋಬರ್ 17: ಮಂಗಳೂರು ಮುಂಬೈ ಜನರ ಜೀವನಾಡಿ ಮತ್ಯ್ಸಗಂಧ ಎಕ್ಸಪ್ರೇಸ್ ರೈಲಿಗೆ 25 ವರ್ಷಗಳ ಬಳಿಕ ಇದೀಗ ಹೊಸ ಕೊಚ್  ಗಳನ್ನು ಆಳವಡಿಸುವ ಕಾರ್ಯಪ್ರಾರಂಭವಾಗಿದೆ. 25 ವರ್ಷಗಳ ಹಿಂದೆ ಪ್ರಾರಂಭವಾದ ಮತ್ಯಗಂಧ ರೈಲು ಮುಂಬೈ ಹಾಗೂ ದಕ್ಷಿಣಕನ್ನಡ ಉಡುಪಿ ಜಿಲ್ಲೆಗಳ ಜನರ ಜೀವನಾಡಿಯಾಗಿತ್ತು, ಯಾವಾಗಲೂ ತುಂಬಿಕೊಂಡೇ ಸಾಗುವ ಈ ರೈಲಿನ ಕೋಚ್ ಗಳು ಹಳೆಯದಾಗಿತ್ತು, ಇಲ್ಲಿಯವರೆಗೆ ಬಂದ ಯಾವುದೇ ಪ್ರತಿನಿಧಿಗಳು ಅದರ ಬಗ್ಗೆ ಯಾವುದೇ ಕ್ರಮಕೈಗೊಂಡಿರಲಿಲ್ಲ.


    ಈ ನಡುವೆ ಮತ್ಸ್ಯಗಂಧ ರೈಲಿನ ಸೀಲಿಂಗ್ ಕುಸಿತದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಅದರ ಬೆನ್ನಲ್ಲೆ ರೈಲ್ವೇ ಬೋರ್ಡ್‌ಗೆ ರೈಲ್ವೇ ಸಚಿವರ ಮೂಲಕ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ನೀಡಿದ್ದರು. ಇದೀಗ ಮತ್ಸ್ಯಗಂಧ ರೈಲಿಗೆ ಎಲ್‌ಎಚ್‌ಬಿ ಕೋಚ್ ಅಳವಡಿಕೆಯ ಪ್ರಕ್ರಿಯೆ ‘ ಚುರುಕುಗೊಂಡಿದೆ.


    ಕೊಂಕಣ ರೈಲು ನಿಗಮವು ದಕ್ಷಿಣ ರೈಲ್ವೇ ಹಾಗೂ ರೈಲ್ವೇ ಮಂಡಳಿಗೆ ಈ ಬಗ್ಗೆ ಕ್ಷಿಪ್ರ ಕೋಚ್ ಅಳವಡಿಕೆಯ ಮನವಿ ನೀಡಿತ್ತು. ಸಂಸದರ ಸೂಚನೆಯಂತೆ ಈಗ ದಕ್ಷಿಣ ರೈಲ್ವೇ, ಕೊಂಕಣ ರೈಲ್ವೇ ಹಾಗೂ ಕೇಂದ್ರ ರೈಲ್ವೇ ಇಲಾಖೆಗೆ ಮತ್ಸ್ಯಗಂಧ ರೈಲಿಗೆ ಎಲ್ ಎಚ್‌ಬಿ ಅಳವಡಿಕೆ ಕುರಿತು ತಾಂತ್ರಿಕ ಒಪ್ಪಿಗೆ ಕೇಳಿ ಮಾತುಕತೆ ನಡೆಸಿದೆ.

    ರೈಲು ಮಂಡಳಿಗೂ ಶೀಘ್ರವಾಗಿ ಎಲ್‌ಎಚ್‌ ಬಿ ಕೋಚ್ ನೀಡುವಂತೆ ಸಂಸದರು ಸೂಚಿಸಿದ ಹಿನ್ನೆಲೆಯಲ್ಲಿ ಕಾರ್ಖಾನೆಯಿಂದ ಕೋಚ್ ನಿರ್ಮಾಣವಾಗಿ ದಕ್ಷಿಣ ರೈಲ್ವೇಗೆ ಕೋಚ್ ಹಸ್ತಾಂತರವಾಗಲಿದೆ.
    ಕೋಚ್ ಹಸ್ತಾಂತರವಾಗುತ್ತಲೆ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಬದಲಾಯಿಸಬೇಕಾದ ಕಾರಣ 120 ದಿನಗಳ ಮುಂಚೆ ಟಿಕೆಟ್ ಬುಕ್ಕಿಂಗ್ ಅಮಾನತಿನಲ್ಲಿಡಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳ ಮೇಲೆ ಸಂಸದರು ನಿಗಾ ವಹಿಸಿದ್ದು, ಕರಾವಳಿ ಮುಂಬಯಿ ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕೆ ಮತ್ಸ್ಯಗಂಧ ರೈಲಿನಲ್ಲಿ ಸಕಲ ವ್ಯವಸ್ಥೆ ಮಾಡಲಾಗುವುದು ಎಂದು ಸಂಸದರ ಕಚೇರಿ ಪ್ರಕಟನೆ ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply