Connect with us

    LATEST NEWS

    ಚಡ್ಡಿದೋಸ್ತ್ ಗಳ ಜಗಳ ಕೊಲೆಯಲ್ಲಿ ಅಂತ್ಯ

    ಚಡ್ಡಿದೋಸ್ತ್ ಗಳ ಜಗಳ ಕೊಲೆಯಲ್ಲಿ ಅಂತ್ಯ

    ಮಂಗಳೂರು ಸೆಪ್ಟೆಂಬರ್ 16: ತನ್ನ ಬಾಲ್ಯ ಸ್ನೇಹಿತರಿಂದಲೇ ಇರಿತಕ್ಕೊಳಗಾಗಿದ್ದ ಯುವಕ ನೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ. ನಗರದ ಪಡೀಲ್ ಬಳಿಯ ಕೊಡಿಕಲ್ ಶಿವನಗರ ನಿವಾಸಿ ನಿಸರ್ಗ ಮೃತಪಟ್ಟ ಯುವಕ .

    ಘಟನೆ ವಿವರ

    ಸೆಪ್ಟೆಂಬರ್ 15 ರಾತ್ರಿ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಅತ್ತಾವರದಲ್ಲಿ ನಡೆಯುವ ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಕೋಡಿಕಲ್ ಶಿವನಗರ ಸ್ನೇಹಿತರಾದ ನಿಸರ್ಗ, ಪುನೀತ್ ,ನಿಖಿಲ್,ಪ್ರಕಾಶ್ ಹಾಗೂ ಶರತ್ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದಾಗ ಪಡೀಲ್ ರೈಲ್ವೆ ಬ್ರಿಡ್ಜ್ ಬಳಿ ರಾತ್ರಿ ಸುಮಾರು 2:30ರ ಹೊತ್ತಿಗೆ ಸ್ನೇಹಿತರ ನಡುವೆ ಜಗಳವಾಗಿದೆ. ಈ ಜಗಳ ತಾರಕಕ್ಕೇರಿ ನಿಸರ್ಗ ಅವರ ಮೇಲೆ 4 ಜನ ಸ್ನೇಹಿತರು ಹಲ್ಲೆ ನಡೆಸಿದ್ದಾರೆ. ಈ ಮಧ್ಯೆ ಪುನೀತ್ ತನ್ನ ಬಳಿ ಇದ್ದ ಚಾಕುವಿನಿಂದ ನಿಸರ್ಗ ಎದೆಗೆ ತಿವಿದಿದ್ದಾನೆ.

    ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ನಿಸರ್ಗ ನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು .ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಸರ್ಗ ಇಂದು ಮೃತಪಟ್ಟಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಕಂಕನಾಡಿ ನಗರ ಠಾಣೆಯ ಪೊಲೀಸರು ಪುನೀತ್ ,ನಿಖಿಲ್ ,ಪ್ರಕಾಶ್ ಹಾಗೂ ಶರತ್ ಅವರನ್ನು ಬಂಧಿಸಿದ್ದಾರೆ .

    Share Information
    Advertisement
    Click to comment

    You must be logged in to post a comment Login

    Leave a Reply