Connect with us

    LATEST NEWS

    ರೈಲ್ವೇ ಅಪಘಾತದಲ್ಲಿ ಕಾಲು ಕಳಕೊಂಡ ಮಗು : ಪುನರ್ಜನ್ಮ ನೀಡಿದ ಎ.ಜೆ. ಆಸ್ಪತ್ರೆ ವೈದ್ಯರು

    ರೈಲ್ವೇ ಅಪಘಾತದಲ್ಲಿ ಕಾಲು ಕಳಕೊಂಡ ಮಗು : ಪುನರ್ಜನ್ಮ ನೀಡಿದ ಎ.ಜೆ. ಆಸ್ಪತ್ರೆ ವೈದ್ಯರು

    ಮಂಗಳೂರು, ಡಿಸೆಂಬರ್15 : ಭೀಕರ ರೈಲ್ವೇ ಅಪಘಾತದಲ್ಲಿ ಎರಡೂವರೆ ವರ್ಷದ ಮಗುವಿನ ಬೇರ್ಪಟ್ಟಿದ್ದ ಎರಡೂ ಕಾಲುಗಳನ್ನು  ಮಗುವಿಗೆ ಮರು ಜೋಡಿಸುವ ಮೂಲಕ ಮಂಗಳೂರಿನ ಎ ಜೆ ಆಸ್ಪತ್ರೆಯ ವೈದ್ಯರು ಪುನರ್ಜನ್ಮ ನೀಡಿದ್ದಾರೆ.

    ಕಳೆದ ಎಪ್ರಿಲ್29 ರಂದು ಕೇರಳದ ಪಯ್ಯನೂರಿನಲ್ಲಿ ಭೀಕರ ರೈಲ್ವೇ ಅಪಘಾತ ನಡೆದಿತ್ತು.

    ಆ ಅಪಘಾತದಲ್ಲಿ ತಾಯಿ ಧಾರುಣವಾಗಿ ಸ್ಥಳದಲ್ಲೇ ಮೃತಪಟ್ಟಿದ್ದರು. ಅವರ ಎರಡುವರೆ ವರ್ಷದ ಮಗು ಮಹಮ್ಮದ್ ಸಾಲೆ ಗಂಭೀರವಾಗಿ ಗಾಯಗೊಂಡಿತ್ತು.

    ಆ ಪುಟ್ಟ ಮಗುವಿನ  ಕಾಲುಗಳೆರಡೂ ತುಂಡಾಗಿ ಬೇರ್ಪಟ್ಟಿದ್ದು, ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಮಗುವನ್ನು ರೈಲ್ವೇ ಪೊಲೀಸರು ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದರು.

    ಆ ಗಂಭೀರತೆ ಅರಿತ ಪಯನ್ನೂರಿನ ಆಸ್ಪತ್ರೆ ಕೂಡಲೇ ಮಂಗಳೂರಿನ ಎಜೆ ಆಸ್ಪತ್ರೆ ಗೆ ಮಗುವಿನ ಜೊತೆಗೆ ಬೇರ್ಪಟ್ಟ ಎರಡೂ ಕಾಲನ್ನು ಥರ್ಮಾಕೋಲ್ ನ ಐಸ್ ಬಾಕ್ಸ್ ನಲ್ಲಿಟ್ಟು ಮಗುವಿನೊಂದಿಗೆ ಸಾಗಿಸಿದ್ದಾರೆ.

    ಎ ಜೆ ಆಸ್ಪತ್ರೆಯ ಪ್ಲಾಸ್ಟಿಕ್ ಸರ್ಜರಿ ಡೀನ್ ಡಾ.ದಿನೇಶ್ ಕದಂ ನೇತೃತ್ವದಲ್ಲಿ ತಜ್ಞ ವೈದ್ಯರ ತಂಡ ಸತತ 7 ಗಂಟೆಗಳ ಕಾಲ ಮಗುವಿನ ಕಾಲಿನ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ.

    ಅವಿರತ ಪ್ರಯತ್ನದಿಂದ ಮೈಕ್ರೋ ವ್ಯಾಸ್ಕ್ಯುಲರ್ ಪ್ಲಾಸ್ಟಿಕ್ ಸರ್ಜರಿ ಶಸ್ತ್ರ ಚಿಕಿತ್ಸೆಯ ಮೂಲಕ ಮಗುವಿನ ಕಾಲು ಜೋಡಣೆಯಲ್ಲಿ ಯಶಸ್ವಿಯಾಗಿದ್ದಾರೆ.

    ಶಸ್ತ್ರ ಚಿಕಿತ್ಸೆ ನಡೆದು ಏಳು ತಿಂಗಳು ಕಳೆದಿದ್ದು, ಮಗು ಮಹಮ್ಮದ್ ಈಗ ನಡೆಯಲು ಶಕ್ತವಾಗಿದ್ದಾನೆ..!

    ತಾಯಿಯನ್ನು ಕಳೆದುಕೊಂಡ ಮಗುವಿನ ಸಮಗ್ರ ಆರೈಕೆಯನ್ನು ಆಸ್ಪತ್ರೆಯ ನರ್ಸಿಂಗ್ ಸಿಬ್ಬಂದಿ ವಿಶೇಷವಾಗಿ ಕಾಳಜಿ ವಹಿಸಿ ಮಾಡುತ್ತಿದ್ದಾರೆ.

    ದೇಹದಿಂದ ಸಂಪೂರ್ಣವಾಗಿ ಬೇರ್ಪಟ್ಟ ಕಾಲುಗಳು ಮತ್ತು ಮಂಡಿ ಮೇಲ್ಭಾಗದಲ್ಲಿ ಕತ್ತರಿಸಿದ ಕಾಲಿನ ಮರು ಜೋಡಣೆ ಯಶಸ್ವಿಯಾಗಿ  ನಡೆಸಿದ್ದು ಎ ಜೆ ಅಸ್ಪತ್ರೆಯ ಸಾಧನೆ ದೇಶದಲ್ಲಿಯೇ ಪ್ರಥಮವಾಗಿದೆ.

    ತನ್ನ  ತಾಯಿಯನ್ನು ಮತ್ತು ಕಾಲುಗಳನ್ನೂ ಕಳಕೊಂಡ ಪುಟ್ಟ ಮಗುವಿಗೆ ಪುನರ್ಜನ್ಮ ನೀಡಿದ ವೈದ್ಯರ ಸೇವಾ ಮನೋಭಾವ ಪ್ರಶಂಸನೀಯವಾಗಿದೆ.

    ವಿಡಿಯೋಗಾಗಿ…

    Share Information
    Advertisement
    Click to comment

    You must be logged in to post a comment Login

    Leave a Reply