Connect with us

    KARNATAKA

    ಚಿಕ್ಕಮಗಳೂರು: ಟ್ರಕ್ ಚಾಲಕನ ಅಜಾಗೃತೆಗೆ ಬೈಕಿನಲ್ಲಿ ಹೋಗುತ್ತಿದ್ದ ಮಹಿಳೆ ಬಲಿ..!

    ಚಿಕ್ಕಮಗಳೂರು :  ಟ್ರಕ್ ಚಾಲಕನ ಬೇಜಾಬ್ದಾರಿಗೆ ಬೈಕಿನಲ್ಲಿ ಗಂಡನ ಜೊತೆ ತೆರಳುತ್ತಿದ್ದ ಮಹಿಳೆ ಪ್ರಾಣ ಕಳಕೊಂಡರೆ ಬೈಕ್ ಸವಾರ ಗಂಭಿರ ಗಾಯಗೊಂಡ ಘಟನೆ ಚಿಕ್ಕಮಗಳೂರಿನ ಕಡೂರಿನಲ್ಲಿ ಸಂಭವಿಸಿದೆ.

     

    ಕಡೂರು ತಾಲೂಕಿನ ತಂಗಲಿ ಬಳಿ ಈ ಅಪಘಾತ ನಡೆದಿದೆ. ಸುಮಾ (25) ಮೃತ ದುರ್ದೈವಿಯಾಗಿದ್ದರೆ ಆಕೆಯ ಪತಿ  ಎಎಸ್ಪಿ ಗನ್ ಮ್ಯಾನ್ ಪೊಲಿಸ್ ಕಾನ್ಸ್ ಟೇಬಲ್ ಜಯಣ್ಣ  ಸ್ಥಿತಿ ಗಂಭೀರವಾಗಿದೆ. ಕಡೂರು ತಾಲೂಕಿನ ತಂಗಲಿ ಮೂಲದ ಜಯಣ್ಣ ದಾವಣಗೆರೆಯಲ್ಲಿ ಎಎಸ್ಪಿ ಗನ್ ಮ್ಯಾನ್ ಆಗಿದ್ದರು. ಪತ್ನಿ ಜೊತೆ ಬೈಕಿನಲ್ಲಿ ರೈಲ್ವೆ ಸ್ಟೇಷನ್ ಗೆ ಹೋಗುವಾಗ ಅಪಘಾತ ಸಂಭವಿಸಿದೆ . ಡ್ಯೂಟಿಗೆ ಹೋಗಲು ಪತ್ನಿ ಜೊತೆ ದಾವಣಗೆರೆಗೆ ಹೊರಟಿದ್ದರು. ಒನ್ ವೇ ನಲ್ಲಿ ಬಂದ ಲಾರಿ ಚಾಲಕನ ಅಜಾಗೃತೆಯಿಂದ ಅಪಘಾತ ನಡೆದಿದೆ. ಪೊಲೀಸ್ ಜಯಣ್ಣ ಸ್ಥಿತಿ ಗಂಭೀರವಾಗಿದ್ದು, ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಟ್ರಕ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply