KARNATAKA
ಸತತ 20 ಗಂಟೆಗಳ ಕಾರ್ಯಾಚರಣೆಯಲ್ಲಿ ಸಾವನ್ನು ಗೆದ್ದ ಬಂದ ಸಾತ್ವಿಕ್
ವಿಜಯಪುರ ಎಪ್ರಿಲ್ 04: ಅಜ್ಜ ಕೊರೆಸಿದ ಕೊಳವೆಬಾವಿಗೆ ಬಿದ್ದ 2 ವರ್ಷದ ಕಂದಮ್ಮ ಸಾತ್ವಿಕ್ ನನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ.
ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಅಜ್ಜ ಕೊರೆಸಿದ ಕೊಳವೆಬಾವಿಗೆ ನಿನ್ನೆ ಸಂಜೆ 5.30ರ ಸುಮಾರಿಗೆ ಆಟವಾಡುತ್ತ ಹೋದ ಸಾತ್ವಿಕ್ ಕೊಳವೆಬಾವಿಗೆ ಬಿದ್ದಿದ್ದ. ಈ ವಿಷಯ ತಿಳಿಯುತ್ತಿದ್ದಂತೆಯೇ ಗ್ರಾಮ ಪಂಚಾಯಿತಿಯಿಂದ ಹಿಡಿದು ತಾಲೂಕು, ಜಿಲ್ಲಾಡಳಿತಾಧಿಕಾರಿಗಳು ಅಗ್ನಿ ಶಾಮಕ ದಳ, ಎನ್ಡಿಆರ್ಎಫ್ (NDRF) ಹಾಗೂ ಎಸ್ಡಿಆರ್ಎಫ್ ತಂಡದ ಸಮೇತ ಘಟನಾ ಸ್ಥಳಕ್ಕಾಗಮಿಸಿ ಸತತ ರಕ್ಷಣಾ ಕಾರ್ಯಚರಣೆಗಿಳಿದಿದ್ದವು. ಅಂತಿಮವಾಗಿ ಬೃಹತ್ ಬಂಡೆ, ಕಲ್ಲುಗಳನ್ನು ಸೀಳಿ ಸುರಂಗ ಮಾರ್ಗದಿಂದ ಒಳಗೆ ಹೊಕ್ಕು ಚಿಕ್ಕ ಪೈಪ್ನಲ್ಲಿ ಸಿಲುಕಿಕೊಂಡು ರೋಧಿಸುತ್ತಿದ್ದ ಕಂದ ಸಾತ್ವಿಕ್ನನ್ನು ಜೀವಂತವಾಗಿ ಹೊರಗೆ ಕರೆದುಕೊಂಡು ಬಂದಿದ್ದಾರೆ. ಸತತ 20 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ರಕ್ಷಿಸುವಲ್ಲಿ ಸಫಲರಾಗಿದ್ದಾರೆ
You must be logged in to post a comment Login