LATEST NEWS
ದಿನೇಶ್ ಗುಂಡೂರಾವ್ ವಿರುದ್ದ ಬಿಜೆಪಿ ಯುವ ಮೋರ್ಚಾ ಗರಂ : ಹಳೇ ಚಪ್ಪಲ್ ಗಳನ್ನು ಕೊರಿಯರ್ ಮಾಡಿದ ಕಾರ್ಯಕರ್ತರು
ದಿನೇಶ್ ಗುಂಡೂರಾವ್ ವಿರುದ್ದ ಬಿಜೆಪಿ ಯುವ ಮೋರ್ಚಾ ಗರಂ : ಹಳೇ ಚಪ್ಪಲ್ ಗಳನ್ನು ಕೊರಿಯರ್ ಮಾಡಿದ ಕಾರ್ಯಕರ್ತರು
ಮಂಗಳೂರು,,ಮಾರ್ಚ್ 15: ಯೋಗಿ ಆದಿತ್ಯನಾಥ್ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿದ ಹೇಳಿಕೆಯನ್ನು ಖಂಡಿಸಿ ಮಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚದ ಕಾರ್ಯಕರ್ತರು ವಿನೂತನ ಪ್ರತಿಭಟನೆ ನಡೆಸಿದರು.
ದ.ಕ. ಜಿಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಕಾರ್ಯಕರ್ತರು ದಿನೇಶ್ ಗುಂಡೂರಾವ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಧಿಕ್ಕಾರ ಕೂಗಿದರು.
ದಿನೇಶ್ ಗುಂಡೂರಾವ್ ಗೆ ಬಿಜೆಪಿ ಕಾರ್ಯಕರ್ತರು ಹಳೇ ಚಪ್ಪಲಿ ಪಾರ್ಸೆಲ್ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ದ ಜಿಲ್ಲಾ ಅಧ್ಯಕ್ಷ ಹರೀಶ್ ಪೂಂಜಾ ಅವರು ಓರ್ವ ಧಾರ್ಮಿಕ ಗುರುವಾಗಿರುವ ಉತ್ತರ ಪ್ರದೇಶ ದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ದಿನೇಶ್ ಗುಂಡೂರಾವ್ ಅವರು ಅವಮಾನಿಸಿದ್ದು ಖಂಡನೀಯ.
ಈ ಕೂಡಲೇ ಅವರು ಕ್ಷಮೆ ಕೇಳಬೇಕು.
ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗಿವುದು ಎಂದು ಎಚ್ಚರಿಕೆ ನೀಡಿದ ಅವರು ಹಳೆ ಚಪ್ಪಲಿಗಳನ್ನು ಕೊರಿಯರ್ ಕಳುಹಿಸಲಾಗುವುದು ಎಂದು ಹೇಳಿದರು.
You must be logged in to post a comment Login