LATEST NEWS
ಆ ಪುಣ್ಯಾತ್ಮನಿಗೆ ರಾಜ್ಯದಲ್ಲಿ ಎಷ್ಟು ತಾಲೂಕುಗಳಿವೆ ಅನ್ನೋದಾದರೂ ತಿಳಿದಿದೆಯಾ…?

ಆ ಪುಣ್ಯಾತ್ಮನಿಗೆ ರಾಜ್ಯದಲ್ಲಿ ಎಷ್ಟು ತಾಲೂಕುಗಳಿವೆ ಅನ್ನೋದಾದರೂ ತಿಳಿದಿದೆಯಾ…?
ಮಂಗಳೂರು ಅಕ್ಟೋಬರ್ 18: ನಳಿನ್ ಕುಮಾರ್ ಗೆ ರಾಜ್ಯದಲ್ಲಿ ಎಷ್ಟು ಜಿಲ್ಲೆಗಳಿವೆ ಎಂದು ಗೊತ್ತಿಲ್ಲ. ಆ ಪುಣ್ಯಾತ್ಮನಿಗೆ ರಾಜ್ಯದಲ್ಲಿ ಎಷ್ಟು ತಾಲೂಕುಗಳಿವೆ ಅನ್ನೋದಾದರೂ ತಿಳಿದಿದೆಯಾ ಎಂದು ನಳಿನ್ ಕುಮಾರ್ ವಿರುದ್ದ ವಾಗ್ದಾಳಿ ನಡೆಸಿದರು.
ಮಂಗಳೂರಿನಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಗೆ ದೇಶದ ಎಕಾನಮಿಯೇ ಗೊತ್ತಿಲ್ಲ. ನಾನಿದನ್ನು ಅಧಿವೇಶನದಲ್ಲೂ ಪ್ರಸ್ತಾಪ ಮಾಡಿದ್ದೇನೆ. ಯಡಿಯೂರಪ್ಪ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂದು ಹೇಳೇ ಇಲ್ಲ ಅಂದ್ರು. ಆದರೆ ಬೊಕ್ಕಸ ಲೂಟಿ ಮಾಡಿದ್ದಾರೆಂದು ನಳಿನ್ ಕುಮಾರ್ ಹೇಳ್ತಾ ಇದ್ದಾರೆ ಎಂದು ಹೇಳಿದರು.

ಇದಕ್ಕೂ ಮೊದಲು ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ಧರಾಮಯ್ಯ ಅನರ್ಹ ಶಾಸಕ ಬಿ.ಸಿ.ಪಾಟೀಲ್ ವಿರುದ್ಧವೂ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಸಿದ್ಧರಾಮಯ್ಯರನ್ನು ವಿರೋಧಿಸಿದವರ ಮೇಲೆ ಐಟಿ ದಾಳಿ ನಡೆಸಲಾಗುತ್ತಿದೆ ಎಂದು ಬಿ.ಸಿ. ಪಾಟೀಲ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಅವರು ಪ್ರಧಾನಿ ಮೋದಿ ಏನು ನನ್ನ ಜೇಬಿನಲ್ಲಿದ್ದಾರಾ, ಬಿ.ಸಿ. ಪಾಟೀಲ್ ಬಾಲಿಶ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಅಪರೇಶನ್ ಕಮಲದ ಮೂಲಕ ಮತ್ತೆ ಇತರ ಪಕ್ಷದವರನ್ನು ಖರೀದಿಸುವ ಪ್ರಯತ್ನದಲ್ಲಿದೆ. ಈ ಅಪರೇಶನ್ ಕಮಲಕ್ಕೆ ಭ್ರಷ್ಟಾಚಾರ ಮಾಡಿದ ಹಣವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಕಾವೇರಿ ಗೆಸ್ಟ್ ಹೌಸನ್ನು ತನಗೇ ನೀಡಿರುವ ಕೇಳಿರುವುದನ್ನು ಸಮರ್ಥಿಸಿಕೊಂಡ ಅವರು ಈ ಹಿಂದೆಯೂ ತಾನು ಅದೇ ಗೆಸ್ಟ್ ಹೌಸ್ ನಲ್ಲಿದ್ದೆ. ಈಗಲೂ ಅದನ್ನೇ ಕೊಡಬೇಕೆಂದು ಸರಕಾರಕ್ಕೆ ಪತ್ರ ಬರೆದಿದ್ದೇನೆ. ಕೊಟ್ಟರೆ ತಗೊಳ್ತೇನೆ ಎಂದರು.