Connect with us

BANTWAL

ಬಂಟ್ವಾಳ : ನಂಬಿದ ಸ್ನೇಹಿತನೇ ಕುಟುಂಬಕ್ಕೆ ಮುಳುವಾದ, ಎರಡು ಮಕ್ಕಳ ತಾಯಿಯನ್ನು ಯಮಾರಿಸಿ ನಡು ರಸ್ತೆಯಲ್ಲಿ ಬಿಟ್ಟ..!

ಬಂಟ್ವಾಳ; ಎರಡು ಮಕ್ಕಳ ತಾಯಿಯೋರ್ವಳನ್ನು ಮದುವೆಯಾಗುವುದಾಗಿ ನಂಬಿಸಿ, ಅ ಬಳಿಕ ನಿರಂತರವಾಗಿ ದೈಹಿಕ ಸಂಪರ್ಕ ಮಾಡಿ ಕೊನೆಗೆ ಕೊಲ್ಲುವ ಬೆದರಿಕೆ ಹಾಕಿದ ಬಗ್ಗೆ ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

ತಾಲೂಕಿನ ಲೊರೆಟ್ಟೊ ನಿವಾಸಿಯೋರ್ವರ ಪತ್ನಿಯಾಗಿದ್ದ ಸಂತ್ರಸ್ಥೆಯ ಮೇಲೆ ನರಿಕೊಂಬು ನಿವಾಸಿ ತಸ್ಲೀಂ ಆರೀಫ್ ಎಂಬಾತ ನಿರಂತರ ಅತ್ಯಾಚಾರ ಎಸಗಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿರುವ ಆರೋಪಿಯಾಗಿದ್ದಾನೆ.
ನಂಬಿದ ಸ್ನೇಹಿತನೇ ಕುಟುಂಬಕ್ಕೆ ಮುಳುವಾದ :
ಸ್ನೇಹಿತನೆಂದು ಮನೆಗೆ ಕರೆದುಕೊಂಡು ಹೋದದ್ದೇ ತಪ್ಪಾಯಿತಾ? ಮನೆಗೆ ಬರುತ್ತಿದ್ದ ಸ್ನೇಹಿತ ಹೆಂಡತಿಯನ್ನೇ ಯಾಮಾರಿಸಿ ಬಿಟ್ಟಿದ್ದ. ಸ್ನೇಹಿತನ ಪತ್ನಿಯನ್ನೇ ಲಪಟಾಯಿಸಿದ ಘಟನೆ ನಡೆದು ಇದೀಗ ಗಂಡನ ಬಿಟ್ಟು ಹೋದ ಪತ್ನಿಗೆ ಅತ್ತ ಗಂಡನು ಇಲ್ಲ,ಇತ್ತ ಆಸೆ ತೋರಿಸಿದ ಶೋಕಿ ಗಿರಾಕಿಯೂ ಇಲ್ಲದ ಪರಿಸ್ಥಿತಿ ನಿರ್ಮಾಣ ವಾಗಿದೆ.

ಏನಿದು ಘಟನೆ ?
ಸಂತ್ರಸ್ಥೆಯ ಗಂಡನ ಸ್ನೇಹಿತನಾದ ನರಿಕೊಂಬು ನಿವಾಸಿ ತಸ್ಲೀಂ ಆರೀಫ ಗಂಡನ ಜೊತೆ ಮನೆಗೆ ಬರುತ್ತಿದ್ದು, ಸಲುಗೆ ಉಂಟಾಗಿ ಮೊಬೈಲ್ ನಂಬ್ರ ಪಡೆದು, ಗಂಡ ಕೆಲಸಕ್ಕೆ ಹೋದ ಸಮಯ ಮನೆಗೆ ಬರುತ್ತಿದ್ದ. ಸಲುಗೆ ಬರಬರುತ್ತಾ ದೈಹಿಕ ಸಂಪರ್ಕಕ್ಕೆ ಬಂದಾಗ ನಿನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿದ, ಹಲವಾರು ಬಾರಿ ದೈಹಿಕ ಸಂಪರ್ಕ ಬೆಳೆಸಿದ್ದ. ಮತ್ತೆ ಮತ್ತೆ ಸುಳ್ಳು ಹೇಳಿ ಸಂರ್ಪಕ ನಡೆಸುತ್ತಿದ್ದ. ಇವರಿಬ್ಬರ ನಡುವಿನ ಪ್ರೇಮ ಪ್ರಕರಣ, ಮತ್ತು ದೈಹಿಕ ಸಂಪರ್ಕ ದ ವಿಚಾರ ಗಂಡನಿಗೆ ಗೊತ್ತಾಗಿ ಅವಳಿಂದ ದೂರ ಇದ್ದ. ನಂತರ ಆರೋಪಿಯೊಂದಿಗೆ ಸಂತ್ರಸ್ಥೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ಧಳು. 3 ತಿಂಗಳ ಹಿಂದೆ ಆರೋಪಿ ತಸ್ಲೀಂ  ಸಂತ್ರಸ್ಥ ಮಹಿಳೆಯನ್ನು ಪಾಣೆಮಂಗಳೂರು ಗ್ರಾಮದ ಜೈನರ ಪೇಟೆಯಲ್ಲಿ ಬಾಡಿಗೆ ಮನೆ ಮಾಡಿ ಕೂರಿಸಿದ್ದ. ಇದೀಗ ಆರೋಪಿ ತಸ್ಲೀಂ ಕುಲ್ಲಕ ಕಾರಣಕ್ಕೆ ಸಂತ್ರಸ್ಥೆಯ ಮುಖಕ್ಕೆ, ಬಾಯಿಗೆ ಕೈಯಿಂದ ಹೊಡೆದು, ಬಲಕಾಲಿನಿಂದ ಎಡ ಸೊಂಟಕ್ಕೆ ಒದ್ದಿರುವುದಲ್ಲದೆ, ಅವಾಚ್ಯ ಶಬ್ದಗಳಿಂದ ಬೈದು, ನಿನ್ನನ್ನು ಮತ್ತು ಮಕ್ಕಳನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಸಂತ್ರಸ್ಥೆಯ ದೂರಿನಂತೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Share Information
Continue Reading
Advertisement
Click to comment

Leave a Reply

Your email address will not be published. Required fields are marked *