BANTWAL
ಬಂಟ್ವಾಳದ ಕೈಕಂಬದಲ್ಲಿ ಮೂವರಿಗೆ ಚೂರಿ ಇರಿತ
ಬಂಟ್ವಾಳದ ಕೈಕಂಬದಲ್ಲಿ ಮೂವರಿಗೆ ಚೂರಿ ಇರಿತ
ಬಂಟ್ವಾಳ ಡಿಸೆಂಬರ್ 11 ಬಂಟ್ವಾಳದ ಕೈಕಂಬದಲ್ಲಿ ಮೂವರಿಗೆ ಚೂರಿ ಇರಿದ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈಕಂಬದಲ್ಲಿ ಬಳಿ ನಿಂತಿದ್ದ ಮೂವರಿಗೆ ದುಷ್ಕರ್ಮಿಗಳ ತಂಡವೊಂದು ದಾಳಿ ನಡೆಸಿ ಚೂರಿ ಇರಿದು ಪರಾರಿಯಾಗಿದೆ. ಗಾಯಾಳುಗಳನ್ನು ಅನ್ಸಾರ್ (23) ಸಫ್ವಾನ್ (23) ಫಯಾಝ್ (23) ಎಂದು ಗುರುತಿಸಲಾಗಿದೆ.
ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡದಿಂದ ಈ ಕೃತ್ಯ ಎಸಗಿದೆ ಎಂದು ಹೇಳಲಾಗಿದ್ದು, ಹಲ್ಲೆ ನಡೆಸಿ ಬಳಿಕ ಚೂರಿ ಇರಿದು ಪರಾರಿಯಾಗಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಂಟ್ವಾಳ ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.
You must be logged in to post a comment Login