Connect with us

    BANTWAL

    ಬಂಟ್ವಾಳ – ಶಾಂತಿಯುತ ಗಣೇಶೋತ್ಸವಕ್ಕೆ ಸಮಾಜದ ಪ್ರಮುಖರ ಪೂರ್ವಭಾವಿ

    ಬಂಟ್ವಾಳ ಸೆಪ್ಟೆಂಬರ್ 15 : ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ತಾಲೂಕಿನ ವಿವಧ ಕಡೆಗಳಲ್ಲಿ ಆಚರಿಸುವ ಗಣೇಶ್ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಸಮಾಜದ ಪ್ರಮುಖರ ಪೂರ್ವಭಾವಿ ಸಭೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪೋಲೀಸ್ ಇನ್ಸ್ ಪೆಕ್ಟರ್ ನಾಗರಾಜ್ ಎಚ್ ಅವರ ನೇತ್ರತ್ವದ ಸಭೆ ನಡೆಸಿದರು.


    ಬಳಿಕ ಮಾತನಾಡಿದ ಅವರು ಗಣೇಶ್ ವಿಸರ್ಜನೆ ಮಾಡುವ ಸಂದರ್ಭದಲ್ಲಿ ನಡೆಯುವ ಮೆರವಣಿಗೆ ಇತರರಿಗೆ ತೊಂದರೆಯಾಗದಂತೆ ಮಾಡುವಂತೆ ಸಂಘಟಕರಿಗೆ ಸೂಚಿಸಿದರು. ಯಾವುದೇ ರೀತಿಯ ಗೊಂದಲಗಳಿಗೆ ಅವಕಾಶ ನೀಡಬೇಡಿ,ಮತ್ತು ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆಯಾಗದಂತೆ ಅದಷ್ಟು ಶಿಸ್ತಿನಲ್ಲಿ ಮಾಡುವಂತೆ ತಿಳಿಸಿದರು.

    ತಾಲೂಕಿನಲ್ಲಿ ಆಚರಿಸಲಾಗುವ ಪ್ರತಿಯೊಂದು ಕಡೆಗಳಲ್ಲೂ ತಾತ್ಕಾಲಿಕ ಸಿ.ಸಿ.ಕ್ಯಾಮರಾ ವನ್ನು ಅಳವಡಿಸುವಂತೆ ತಿಳಿಸಿದರು. ಗಣೇಶನ ವಿಸರ್ಜನೆ ವೆರೆಗೆ ರಾತ್ರಿಪಾಳಿಯಲ್ಲಿ ಸ್ವಯಂ ಸೇವಕರು ಕಾಯುವಂತೆ ತಿಳಿಸಿದರು. ಮೆರವಣಿಗೆ ವೇಳೆ ಡಿ.ಜೆ.ಗೆ ಅವಕಾಶ ನೀಡುವುದಿಲ್ಲ. ಸ್ಥಳೀಯ ಆಡಳಿತ, ಮೆಸ್ಕಾಂ, ಅಗ್ನಿಶಾಮಕ ದಳದವರಿಂದ ಅನುಮತಿ ಪಡೆದುಕೊಳ್ಳಿ ಎಂದು ತಿಳಿಸಿದರು. ಯಾವುದೇ ಗೊಂದಲಗಳಿಲ್ಲದೆ,ಶಾಂತಿಯುತವಾಗಿ ಕಾರ್ಯಕ್ರಮಗಳನ್ನು ನಡೆಸುವಂತೆ ಸಂಘಟಕರಲ್ಲಿ ಮನವಿ ಮಾಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply