LATEST NEWS
ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಹೊಟ್ಟೆಗೆ ಒದ್ದ ಆರೋಪಿ
ಕ್ಷುಲ್ಲಕ ಕಾರಣಕ್ಕೆ ಮಹಿಳೆಯ ಹೊಟ್ಟೆಗೆ ಒದ್ದ ಆರೋಪಿ
ಬೆಂಗಳೂರು ಜನವರಿ 7: ಕ್ಷುಲ್ಲಕ ಕಾರಣಕ್ಕೆ ಮಹಿಳೆಯೋರ್ವಳಿಗೆ ಒದ್ದು ಹಲ್ಲೆ ನಡೆಸಿ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಬಸವೇಶ್ವರನಗರದ ಸಿದ್ದಯ್ಯ ಪುರಾಣಿಕ್ ರಸ್ತೆಯಲ್ಲಿರುವ ಎಚ್.ಪಿ ಪೆಟ್ರೋಲ್ ಬಂಕ್ನಲ್ಲಿ ಈ ಘಟನೆ ನಡೆದಿದೆ. ಶೋಭಾ ಅವರೇ ಹಲ್ಲೆಗೊಳಗಾದ ಮಹಿಳೆಯಾಗಿದ್ದಾರೆ.
ಹಲ್ಲೆಗೊಳಗಾದ ಶೋಭ ಮತ್ತು ಹಲ್ಲೆ ಮಾಡಿದ ದಂಪತಿಗಳು ಪೆಟ್ರೊಲ್ ಹಾಕಲು ಪೆಟ್ರೊಲ್ ಹಾಕಲು ಬಂದಿದ್ದಾರೆ. ಹಲ್ಲೆ ಮಾಡಿದ ದಂಪತಿಯ ಸ್ಕೂಟರ್ ಶೋಭಾ ಅವರ ಸ್ಕೂಟರ್ ಗೆ ಡಿಕ್ಕಿ ಮಾಡಿದ್ದರು. ಈ ಹಿನ್ನಲೆಯಲ್ಲಿ ಶೋಭಾ ಅವರು ಪ್ರಶ್ನಿಸಿದ್ದಕ್ಕೆ ದಂಪತಿ ಮೊದಲು ವಾಗ್ವಾದ ನಡೆಸಿದ್ದಾರೆ. ನಂತರ ಪರಿಸ್ಥಿತಿ ಕೈ ಮೀರಿ ಆರೋಪಿ ಒಂದು ಸಲ ಶೋಭಾ ಅವರ ಸ್ಕೂಟರ್ಗೆ ಒದಿದ್ದಾನೆ.
ಈ ಸಂದರ್ಭ ಬಂಕ್ ನೌಕರರು ಹಾಗೂ ಇತರೆ ವಾಹನಗಳ ಸವಾರರು ಮಧ್ಯಪ್ರವೇಶಿಸಿ ಆತನನ್ನು ಕಳುಹಿಸಲು ಮುಂದಾಗುತ್ತಾರೆ. ಸ್ಕೂಟರ್ನಲ್ಲಿ ಸ್ವಲ್ಪ ದೂರ ಸಾಗಿದ ಬಳಿಕ ದಂಪತಿ ಪುನಃ ಶೋಭಾ ಅವರ ಬಳಿ ಬಂದು ಗಲಾಟೆ ಮಾಡಿ. ಈ ಹಂತದಲ್ಲಿ ಆರೋಪಿ ಶೋಭಾ ಅವರ ಹೊಟ್ಟೆಗೆ ಒದ್ದು ಪತ್ನಿಯನ್ನು ಕರೆದುಕೊಂಡು ಹೋಗಿದ್ದಾನೆ. ಪೆಟ್ರೋಲ್ ಪಂಪ್ ನಲ್ಲಿದ್ದ ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಈ ಎಲ್ಲಾ ವಿದ್ಯಮಾನ ಸೆರೆಯಾಗಿದ್ದು, ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
VIDEO
Facebook Comments
You may like
ತಲಪಾಡಿ ದೇವಿಪುರ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗ ಪಲ್ಟಿಯಾದ ಮರಳು ಸಾಗಿಸುತ್ತಿದ್ದ ಟಿಪ್ಪರ್
ಫಿಟ್ನೆಸ್ ಬಾಡಿ ತೋರಿಸಲು ಹೋಗಿ ಬ್ಲಾಕ್ ಮೇಲ್ ಗೊಳಗಾದ ಯುವಕ…!
ಸಾಮಾಜಿಕ ಜಾಲತಾಣದ ಅಪರಿಚಿತರ ಸ್ನೇಹ..6 ವರ್ಷದ ಮಗಳ ಎದುರೆ ಹೋಯಿತು ಪ್ರಾಣ
ಆನೆಗೆ ಬೆಂಕಿ ಇಟ್ಟ ಪಾಪಿಗಳು! ಸುಟ್ಟ ನೋವು ತಾಳಲಾರದೆ ಆನೆ ಸಾವು
4ನೇ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ವಿರುದ್ದ ರೋಚಕ ಗೆಲವು – ಸರಣಿ ಗೆದ್ದ ಭಾರತ
ಯುವತಿ ಮೇಲೆ ಸಹೋದರರಿಂದ ಅತ್ಯಾಚಾರ: ಓರ್ವನ ಬಂಧನ
You must be logged in to post a comment Login