LATEST NEWS
ವಿದ್ಯಾಭ್ಯಾಸ ಮುಂದುವರಿಕೆಗೆ ಪತಿಯೊಂದಿಗೆ ವಾದ, ನೇಣಿಗೆ ಶರಣಾದ ಗರ್ಭಿಣಿ..!
![](https://i0.wp.com/themangaloremirror.in/wp-content/uploads/2024/04/For-Advertisement-Please-Contact.jpg?fit=728%2C90&ssl=1)
ತಿರುವನಂತಪುರ : ಗರ್ಭಿಣಿ ಮಹಿಳೆ ಗಂಡನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಕೇರಳ ತಿರುವನಂತಪುರ ಕಲ್ಲಂಬಳಂ ಓತೂರ್ ನಿವಾಸಿ ಲಕ್ಷ್ಮಿ(19) ಮೃತ ಮಹಿಳೆಯಾಗಿದ್ದಾಳೆ.
ಕಿಟಕಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಲಕ್ಷ್ಮೀ ಶವ ಪತ್ತೆಯಾಗಿದೆ. ಬಿಎ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದ ಲಕ್ಷ್ಮೀ, ಪತಿ ಕಿರಣ್ ಹಾಗೂ ಕುಟುಂಬದವರೊಂದಿಗೆ ಹೆಚ್ಚಿನ ವ್ಯಾಸಂಗ ವಿಚಾರದಲ್ಲಿ ಜಗಳ ನಡೆದಿತ್ತು ಎನ್ನಲಾಗಿದೆ. 11 ತಿಂಗಳ ಹಿಂದೆಯಷ್ಟೇ ಇಬ್ಬರೂ ಮದುವೆಯಾಗಿದ್ದರು. ಆಕೆ ಗರ್ಭಿಣಿ ಎಂಬ ಕಾರಣಕ್ಕೆ ಪತಿ ಆಕೆಗೆ ಓದದಂತೆ ನಿರ್ಬಂಧ ಹೇರಿದ್ದು, ಗರ್ಭಪಾತ ಮಾಡುವಂತೆ ಕೇಳಿಕೊಂಡಾಗ ಮನೆಯವರು ಒಪ್ಪಿರಲಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದ ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.ಕಡೈಕ್ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
.
![](https://i0.wp.com/themangaloremirror.in/wp-content/uploads/2024/06/IMG-20240626-WA0023.jpg?fit=1280%2C670&ssl=1)
You must be logged in to post a comment Login