KARNATAKA
ಚೆನ್ನೈನಲ್ಲಿ ಅಪಹರಣಕ್ಕೊಳಗಾದ ನೌಕಾಪಡೆ ಅಧಿಕಾರಿಯನ್ನು ಜೀವಂತವಾಗಿ ಸುಟ್ಟ ದುಷ್ಕರ್ಮಿಗಳು
ಪಾಲ್ಘರ್, ಫೆಬ್ರವರಿ 07 : ಚೆನ್ನೈನಲ್ಲಿ ಅಪಹರಣಕ್ಕೊಳಗಾಗಿದ್ದ 26 ವರ್ಷದ ನೌಕಾಪಡೆಯ ಅಧಿಕಾರಿಯನ್ನು ದುಷ್ಕರ್ಮಿಗಳು ಮಹಾರಾಷ್ಟ್ರದ ಪಾಲ್ಘಾರ್ನಲ್ಲಿ ಕೈಕಾಲು ಕಟ್ಟಿ ಬೆಂಕಿ ಹಚ್ಚಿದ್ದು, ತೀವ್ರ ಗಾಯಗೊಂಡಿದ್ದ ನೌಕಾಧಿಕಾರಿ ಶನಿವಾರ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ತೀವ್ರವಾಗಿ ಗಾಯಗೊಡಿದ್ದ ಜಾರ್ಖಂಡ್ನ ರಾಂಚಿ ಮೂಲದ ಸೂರಜ್ ಕುಮಾರ್ ದುಬೆ ಅವರು ಮುಂಬೈನ ನ್ಯಾವಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಕೊಯಮತ್ತೂರ್ ವಿಭಾಗದ ಭಾರತೀಯ ನೌಕಾದಳದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸೂರಜ್ ಕುಮಾರ್, ರಜೆ ಮುಗಿಸಿ ಕರ್ತವ್ಯಕ್ಕೆ ಹಾಜರಾಗಲು ಚೆನ್ನೈಗೆ ಬಂದಿದ್ದರು. ರಾತ್ರಿ 9 ಗಂಟೆ ಗೆ ಗನ್ ತೋರಿಸಿ, ಮೂವರು ದುಷ್ಕರ್ಮಿಗಳು ವಿಮಾನ ನಿಲ್ದಾಣದಿಂದ ಸೂರಜ್ರನ್ನು ಅಪಹರಿಸಿದ್ದರು. ಜೊತೆಗೆ 10 ಲಕ್ಷ ರೂಗಳಿಗೆ ಬೇಡಿಕೆಯಿಟ್ಟಿದ್ದರೆಂದು ತಿಳಿದುಬಂದಿದೆ.
ಅಪಹರಿಸಿದ ನಂತರ ಚೆನ್ನೈನಲ್ಲಿ ಮೂರು ದಿನಗಳ ಬಂಧಿಸಿಟ್ಟಿದ್ದು, ಬಳಿಕ ಮಹಾರಾಷ್ಟ್ರದ ಪಾಲ್ಘಾರ್ ಜಿಲ್ಲೆಯ ತಲಸಾರಿ ಪ್ರದೇಶದ ವೆಜ್ಜಿ ಎಂಬಲ್ಲಿಗೆ ಸ್ಥಳಾಂತರಿಸಿದ್ದಾರೆ. ಶುಕ್ರವಾರ ಬೆಳಿಗ್ಗೆ ಸೂರಜ್ನನ್ನು ಕೈಕಾಲು ಕಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ದುಬೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ.
ಶೇ. 90 ರಷ್ಟು ಗಾಯಗಳಾಗಿದ್ದ ಅವರನ್ನು ಮುಂಬೈನ ನ್ಯಾವಿ ಆಸ್ಪತ್ರೆ ದಾಖಲಿಸಲಾಯಿತಾದರೂ, ದಾರಿ ಮಧ್ಯೆಯೇ ಆತ ಕೊನೆಯುಸಿರೆಳೆದಿದ್ದ ಎಂದು ಪೊಲೀಸ್ ಅಧಿಕಾರಿ ನವಾಡ್ಕರ್ ತಿಳಿಸಿದ್ದಾರೆ.
Facebook Comments
You may like
ಮದುವೆ ಮಂಟಪವಾಗಿ ಬದಲಾದ ಜೈಲು…!
ಐಶಾರಾಮಿ ಕಾರು ಮಾರಾಟ ಪ್ರಕರಣ – ಎಸ್ಐ ಕಬ್ಬಾಳರಾಜ್, ಇನ್ ಸ್ಪೆಕ್ಟರ್ ರಾಮಕೃಷ್ಣ ಸಸ್ಪೆಂಡ್
ಹಾಡುಹಗಲೇ ದರೋಡೆಗೆ ಬಂದವರು ಅಗ್ನಿಶಾಮಕ ದಳದ ಸೈರನ್ ಕೇಳಿ ಎಸ್ಕೇಪ್…!!
ಸಿಸಿಬಿ ಪೊಲೀಸರ ವಿರುದ್ದ ಸಿಐಡಿ ತನಿಖೆ ಆರಂಭ.. ಆರೋಪಿಗಳು ಇನ್ನೂ ಕರ್ತವ್ಯದಲ್ಲಿ…!!
ಡಿಎಸ್ಪಿಯಾಗಿ ಚಿನ್ನದ ಓಟಗಾರ್ತಿ ‘ಹಿಮದಾಸ್’ ಅಧಿಕಾರ ಸ್ವೀಕಾರ
ಚೆನ್ನೈ-ಮಂಗಳೂರು ಎಕ್ಸ್ಪ್ರೆಸ್ನಲ್ಲಿ ಜಿಲೆಟಿನ್ ಕಡ್ಡಿ ಸಾಗಾಟ: ಮಹಿಳೆ ಬಂಧನ
You must be logged in to post a comment Login