DAKSHINA KANNADA
ಅಪಾಯಕಾರಿ ರೀತಿಯಲ್ಲಿ ಕಾಳಿಂಗ ಸರ್ಪವನ್ನು ಹಿಡಿದ ಉರಗತಜ್ಞ ..!
ಉಪ್ಪಿನಂಗಡಿ, ನವೆಂಬರ್ 28: ತಾಲೂಕಿನ ನೆಲ್ಯಾಡಿ ಎಂಬಲ್ಲಿ ಅಪಾಯಕಾರಿ ರೀತಿಯಲ್ಲಿ ಕಾಳಿಂಗ ಸರ್ಪವನ್ನು ಉರಗತಜ್ಞ ಹಿಡಿದ ಘಟನೆ ನಡೆದಿದೆ.
ಉಪ್ಪಿನಂಗಡಿ ಸಮೀಪದ ನೆಲ್ಯಾಡಿಯ ಚರ್ಚೊಂದರ ಬಳಿ ಕಾಳಿಂಗ ಸರ್ಪ ಪತ್ತೆಯಾಗಿತ್ತು. ಉರಗತಜ್ಞ ಸ್ನೇಕ್ ಝಕಾರಿಯಾ ಇತರ ಹಾವುಗಳನ್ನು ಹಿಡಿಯುವಂತೆ ಕಾಳಿಂಗ ಸರ್ಪವನ್ನು ಹಿಡಿದು, ಕೂದಲೆಳೆಯಿಂದ ಹಾವಿನಿಂದ ಕಚ್ಚಿಸಿಕೊಳ್ಳುವುದನ್ನು ತಪ್ಪಿಸಿಕೊಂಡಿದ್ದಾರೆ.
ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದ ಸ್ನೇಕ್ ಝಕಾರಿಯಾ ಹಾವನ್ನು ಹಿಡಿದು ಫೋಟೋಗಳಿಗೆ ಫೋಸ್ ನೀಡಿ, ಬಳಿಕ ಹಾವನ್ನು ನಿರ್ಜನ ಪ್ರದೇಶಕ್ಕೆ ಬಿಟ್ಟಿದ್ದಾರೆ.
You must be logged in to post a comment Login