Connect with us

    LATEST NEWS

    ಕಾಲೇಜು ವಿದ್ಯಾರ್ಥಿಗೆ  ದುಷ್ಕರ್ಮಿಗಳಿಂದ ಚೂರಿ ಇರಿತ 

    ಕಾಲೇಜು ವಿದ್ಯಾರ್ಥಿಗೆ  ದುಷ್ಕರ್ಮಿಗಳಿಂದ ಚೂರಿ ಇರಿತ 

    ಶಿವಮೊಗ್ಗ,ಡಿಸೆಂಬರ್ 16 : ವಿದ್ಯಾರ್ಥಿಯೊಬ್ಬನಿಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗದ ಕೆ. ಆರ್ ಪುರಮ ನ ಶಬರೀಶ್ ಹಲ್ಲೆಗೊಳಗಾದ ವಿದ್ಯಾರ್ಥಿ.

    ಕಾಲೇಜು ಮುಗಿದ ಬಳಿಕ ತನ್ನ ಗೆಳೆಯರೊಂದಿಗೆ ಉದ್ಯಾನವನದಲ್ಲಿ ಕುಳಿತ್ತಿದ್ದ ಸಂದರ್ಭ ನಾಲ್ವರು ದುಷ್ಕರ್ಮಿಗಳ ತಂಡ ಬಂದು ಶಬರೀಶ್ ಮೇಲೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

    ತೀವ್ರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿ ಶಬರೀಶನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ ಜನರು ಜಮಾಯಿಸಿ ಕೆಲ ಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿತ್ತು.

    ಮದ್ಯರಾತ್ರಿಯವರೆಗೂ ಅಸ್ಪತ್ರೆಯ ಮುಂಬಾಗ ಜಮಾಯಿಸಿದ್ದರು. ಸ್ಥಳೀಯ ಪೋಲಿಸರು ಪ್ರಕರಣದ ಬಗ್ಗೆ ಗಂಭೀರತೆ ಹೊಂದಿಲ್ಲ ಎಂದು ಅವರು ಅರೋಪಿಸಿದರು.

    ಪೊಲೀಸರು ಆರೋಪಿಗಳನ್ನು ತಕ್ಷಣದಲ್ಲೇ ಬಂಧಿಸಬೇಕು ಇಲ್ಲವಾದ್ದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಕೆಲ ಸಂಘಟನೆಯ ಮುಖಂಡರು ಎಚ್ಚರಿಕೆ ನೀಡಿದ್ದಾರೆ.

    ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.ಹಿರಿಯ ಪೋಲಿಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply